ಒಂದು ವೇಳೆ ದೇವಸ್ಥಾನ ತೆರವುಗೊಳಿಸಲು ಮುಂದಾದಲಿ ಮುಂದಿನ ದಿನಗಳಲ್ಲಿ ಈ ಭಾಗದ ಎಲ್ಲ ವರ್ಗದ ಜನರು ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯ ಮುಖಂಡರಾದ ನರೇಶ್, ರಾಮು, ಯರ್ರಿಸ್ವಾಮಿ, ಕೃಷ್ಣವೇಣಿ, ನಾರಾಯಣಮ್ಮ, ಜ್ಯೋತಿ, ಶ್ರೀನಿವಾಸ್ ಎಚ್ಚರಿಸಿದರು.
ಮುತ್ತುಮಾರೆಮ್ಮ ದೇವಸ್ಥಾನ ನೂರಾರು ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಹಿಂದೂ ಸಂಪ್ರಾದಯದಂತೆ ದೇವಿಗೆ ನಿತ್ಯ ಪೂಜೆ, ಧಾರ್ಮಿಕ ಸೇವೆ ನಡೆಸಲಾಗುತ್ತಿದೆ. ಇತ್ತೀಚೆಗಷ್ಟೇ ದೇವಸ್ಥಾನಕ್ಕೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮಾನ್ಯತೆ ದೊರೆತಿದೆ. ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಸೌಲಭ್ಯ ದೊರೆತಿದೆ ಎಂದು ದೇವಸ್ಥಾನದ ಅರ್ಚಕ ವಿಜಯ್ಕುಮಾರ್ ಹೇಳಿದರು.
ಕಣ್ಣಲ್ಲಿ ನೀರು: ದೇವಸ್ಥಾನ ತೆರವಿಗೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳು ನೀಡಿದ ನೋಟಿಸ್ ತಲುಪುತ್ತಿದ್ದಂತೆಯೇ ಮುತ್ತುಮಾರೆಮ್ಮ ಮೂರ್ತಿಯ ಬಲ ಕಣ್ಣಿನಲ್ಲಿ ನೀರು ಹರಿಯುತ್ತಿದೆ ಎಂಬ ವದಂತಿ ಹಬ್ಬಿತು. ದೇವಸ್ಥಾನಕ್ಕೆ ಮಧ್ಯಾಹ್ನದವರೆಗೂ ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಬಂದು ಹೋಗುತ್ತಿದ್ದು ಕಂಡಬಂತು.