ಗರ್ಭಗುಡಿಯಲ್ಲಿರುವ ದೇವರ ಪ್ರಭಾವಳಿ, ಬಂಗಾರದ ಕಿವಿ, ಮೂಗು, ನಾಮ, ಕಂಠಾಭರಣ, ವಜ್ರದ ಕಣ್ಣುಬ್ಬು, ಗಂಟೆ, ಬೆಳ್ಳಿ ಕವಚ, ತಟ್ಟೆ, ವಜ್ರಾಂಗಿ ಸೇರಿದಂತೆ ಸುಮಾರು 50ರಿಂದ 60 ವರ್ಷಗಳ ಕಾಲದ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ದೇವಸ್ಥಾನದಲ್ಲಿ ಮಲಗಿದ್ದ ನಂಜಪ್ಪ ಹಾಗೂ ಸತ್ಯನಾರಾಯಣ ಅವರ ಕೊಠಡಿಗೆ ಬೀಗ ಹಾಕಿ ಅವರನ್ನು ಈಚೆ ಬರದಂತೆ ಕಳ್ಳರು ನೋಡಿಕೊಂಡಿದ್ದರು.