ಚಿಕ್ಕಮಗಳೂರು: ಅಹಿಂಸೆ ಮತ್ತು ದೇಶ ವಿರೋಧಿ ಚಟುವಟಿಕೆಗಳನ್ನು ವಿರೋಧಿಸಬೇಕು ಎಂದು ಉಜಿರೆಯ ಮಲ್ಜಲ್ ಸಂಸ್ಥೆಯ ಅಧ್ಯಕ್ಷ ಅಲ್ ಹಾದೀ ತಂಙಳ್ ತಿಳಿಸಿದರು.
ಶಾಂತಿ ನಗರದ ಕಲ್ಲುದೊಡ್ಡಿಯಲ್ಲಿ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಹಮ್ಮಿಕೊಂಡಿದ್ದ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಿಸಿ ಮಾತನಾಡಿದರು.
ಸೇವೆಯನ್ನು ಮುಖ್ಯ ಗುರಿಯಾಗಿಸಿಕೊಂಡಾಗ ಮಾತ್ರ ಸಂಘಟನೆಯಲ್ಲಿ ಸಾರ್ಥಕತೆ ಕಾಣಬಹುದಾಗಿದೆ. ಅನೇಕ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿದ್ದರೂ ಆರ್ಥಿಕವಾಗಿ ಹಿಂದುಳಿದಿದ್ದರಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂತಹವರನ್ನು ಗುರುತಿಸಿ ನೆರವು ನೀಡಬೇಕಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ನಿರ್ದೇಶಕ ಎಪಿಎಸ್ ಅಟ್ಟಕ್ಕೋಯ ತಂಙಳ್, ಶಾಖಾ ಅಧ್ಯಕ್ಷ ಹನೀಫ್ ಮಿಸ್ಟಾಹಿ ಅಧ್ಯಕ್ಷತೆ ವಹಿಸಿದ್ದರು.
ಮಸೀದಿ ಖತೀಬರಾದ ಹಾರಿಸ್ ಸಖಾಫಿ, ತ್ವಾಹಾ ಸಅದಿ, ಅಬ್ದುಲ್ ರಜಾಕ್ ಮದನಿ, ಯಹ್ಯಾ ಸಖಾಫಿ, ಅಬ್ಬಾಸ್ ಲತೀಫಿ, ಎಸ್ವೈಎಫ್ ಅಧ್ಯಕ್ಷ ಎ.ಯೂಸಫ್ ಹಾಜಿ, ಕೆ.ಬಿ.ಅಬೂಬಕರ್, ಅಬ್ದುಲ್ಲಾ ಹಾಜಿ, ಅಬ್ಬಾಸ್, ಮುನೀರ್ ಅಹಮದ್ ರಫೀಕ್ ಸಖಾಫಿ ಹಾಜರಿದ್ದರು.