ತಿರುವನಂತಪುರ(ಪಿಟಿಐ): ಇಬ್ಬರು ಮೀನುಗಾರನ್ನು ಹತ್ಯೆಗೈದ ಇಟಲಿಯ ಇಬ್ಬರನ್ನು ಬಂಧಿಸಲಾಗಿದ್ದು, ಭಾರತೀಯ ಕಾನೂನಿನ ಪ್ರಕಾರ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಭಾನುವಾರ ತಿಳಿಸಿದ್ದಾರೆ.
ಭಾರತೀಯ ಮೀನುಗಾರರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣವನ್ನು ಕೇರಳ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ, ಈ ತನಿಖೆಗೆ ಕೇಂದ್ರ ಸಂಪೂರ್ಣ ನೆರವು ನೀಡುತ್ತದೆ ಎಂದೂ ಅವರು ತಿಳಿಸಿದರು.