ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಾಚರಣೆಯಿಂದ ಫಲಪ್ರಾಪ್ತಿ: ಸ್ವಾಮೀಜಿ

Last Updated 13 ಫೆಬ್ರುವರಿ 2012, 8:00 IST
ಅಕ್ಷರ ಗಾತ್ರ

ಗಡಿಗೇಶ್ವರ (ನರಸಿಂಹರಾಜಪುರ):  ಧರ್ಮದ ಆಚರಣೆ ಮತ್ತು ಈಶ್ವರನ ಆರಾಧನೆಯಿಂದ ಫಲ ಸಿಗುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ  ಸ್ವಾಮೀಜಿ ನುಡಿದರು.

ತಾಲ್ಲೂಕಿನ ಗಡಿಗೇಶ್ವರ ಗ್ರಾಮದಲ್ಲಿ ಭಾನುವಾರ ನೂತನವಾಗಿ ನಿರ್ಮಿಸಿರುವ ಭವಾನೀ ಶಂಕರ ಗಡಿಗೇಶ್ವರ ದೇವಸ್ಥಾನದ ಪ್ರತಿಷ್ಠಾ ಹಾಗೂ ಕುಂಭಾಭೀಷೇಕ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಧರ್ಮದಲ್ಲಿ ಶ್ರದ್ಧೆ, ಭಗವಂತನಲ್ಲಿ ಭಕ್ತಿ ಇಲ್ಲದಿದ್ದರೆ ಜೀವನವೇ ಅಲ್ಲ. ಮನುಷ್ಯ ಮತ್ತು ಬೇರೆ ಪ್ರಾಣಿಗಳಿಗಿರುವ ವ್ಯತ್ಯಾಸವೆಂದರೆ ಧರ್ಮ ಮತ್ತು ಭಗವಂತನನ್ನು ಆರಾಧಿಸುವ ಶಕ್ತಿ ಮನುಷ್ಯನಿಗೆ ಇದೆ. ಹಾಗಾಗಿ ಮಾನವನನ್ನು ಉತ್ಕೃಷ್ಟ ಎಂದು ಶಾಸ್ತ್ರ ಹೇಳಿದೆ. ದೇವರ ಆರಾಧನೆ ಮನುಷ್ಯನ ಒಳಿತಿಗಾಗಿ ಎಲ್ಲರ ಶ್ರೇಯಸ್ಸಿಗಾಗಿ ಹೊರತು ಯಾರನ್ನು ಸಂತೋಷಪಡಿಸಲು ಅಥವಾ ಹೆಸರನ್ನು ಪಡೆಯುವುದಕ್ಕಲ್ಲ.
 
ಭಗವಂತನ ಸನ್ನಿಧಿಯಲ್ಲಿ ಎಲ್ಲರೂ ಒಂದೇ ಎಂದರು. ವೇದಮೂರ್ತಿ, ಶ್ಯಾಮಲಗಣೇಶ್, ಅರವಿಂದ ಸೋಮಯಾಜಿ ಇದ್ದರು. ಸಭಾ ಕಾರ್ಯಕ್ಕೂ ಮುನ್ನಾ ಸ್ವಾಮೀಜಿ ಭವಾನೀಶಂಕರ ಗಡಿಗೇಶ್ವರ ಸ್ವಾಮಿಯ ಕುಂಭಾಭಿಷೇಕ, ಮಹಾಪೂಜೆ ಶಿಖರ ಪ್ರತಿಷ್ಠೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT