ನಂತರ ಕವಯತ್ರಿ ಪ್ರತಿಭಾನಂದಕುಮಾರ್ ಅವರು ತಮ್ಮ `ಅನುದಿನದ ಅಂತರಗಂಗೆ' ಆತ್ಮಕಥೆಯ ಬಗ್ಗೆ ಮಾತನಾಡಿದರು. ತಮಗಿದ್ದ ದಂತದ ವಕ್ರತೆಯಿಂದ ತಾವು ಅನುಭವಿಸಿದ ಕೀಳರಿಮೆ, ಆತ್ಮವಿಶ್ವಾಸದ ಕೊರತೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದರು. ನಂತರ ಅವರು ಅದನ್ನು ಮೀರಿ ಬೆಳೆದ ಬಗೆಗೆ ವಿವರಿಸಿದರು.
ಎ.ಎಂ. ಮದರಿ ಅವರು ತಮ್ಮ `ಗೊಂದಲಿಗ್ಯ' ಎಂಬ ತಮ್ಮ ಆತ್ಮಕಥೆಯ ವಿವರ ನೀಡಿದರು. ಅಲೆಮಾರಿ ಜನಾಂಗವಾದ ಗೊಂದಲಿಗರ ನೋವು ನಲಿವನ್ನು ಇದೇ ವೇಳೆ ಹಂಚಿಕೊಂಡರು.
ಒಟ್ಟಾರೆ ತಾವೇ ಬರೆದ ಆತ್ಮಕಥೆಯ ಬಗೆಗೆ ವಿವರಿಸಿದ್ದು ಈ ಗೋಷ್ಠಿಯ ವಿಶೇಷತೆಯಾಗಿತ್ತು.