ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಧಾರವಾಡ ಸಾಹಿತ್ಯ ಸಂಭ್ರಮ'ದಲ್ಲಿ ಆತ್ಮಕಥೆಗಳ ಮೆಲುಕು

Last Updated 25 ಜನವರಿ 2013, 11:01 IST
ಅಕ್ಷರ ಗಾತ್ರ

ಧಾರವಾಡ : .ಶುಕ್ರವಾರ ಬೆಳಿಗ್ಗೆ ಆರಂಭವಾದ `ಧಾರವಾಡ ಸಾಹಿತ್ಯ ಸಂಭ್ರಮ'ದಲ್ಲಿ ಗೋಷ್ಠಿಗಳು ಸಾಂಗವಾಗಿ ನಡೆದವು. ಶುಕ್ರವಾರ ಮಧ್ಯಾಹ್ನ ಇಲ್ಲಿನ ಕರ್ನಾಟಕ ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಭವನದಲ್ಲಿ  ಮಧ್ಯಾಹ್ನ 11:15ಕ್ಕೆ ವಿಮರ್ಶಕ ಎಸ್. ದಿವಾಕರ್ ಅವರ ನಿರ್ದೇಶನದಲ್ಲಿ ಆರಂಭವಾದ 2ನೇ ಗೋಷ್ಠಿ `ಆತ್ಮಕಥೆಯ ಓದು' ವಿನಲ್ಲಿ ಒಟ್ಟು ಮೂರು ಮಂದಿ ತಾವೇ ಬರೆದ ಆತ್ಮಕಥೆಯ ಸ್ವಲ್ಪ ಭಾಗಗಳನ್ನು ಓದಿದರು.

ಮೊದಲಿಗೆ ಖ್ಯಾತ ನಾಟಕಕಾರರಾದ ಗಿರೀಶ ಕಾರ್ನಾಡ ಅವರು ತಮ್ಮ ಆಡಾಡತ ಆಯುಷ್ಯ' ಆತ್ಮಕಥೆಯನ್ನು ಓದಿದರು. ಅದರಲ್ಲಿ ಅವರು ಧಾರವಾಡದಲ್ಲಿ 6 ವರ್ಷ ಕಳೆದ ರೀತಿ. ಆ ಸಮಯದಲ್ಲಿ ಅವರು ಹಿರಿಯ ಸಾಹಿತಿಗಳೊಂದಿಗೆ ನಡೆಸಿದ ಮಾತುಕತೆ ಇತ್ಯಾದಿಗಳನ್ನು ಮೆಲುಕು ಹಾಕಿದರು.

ನಂತರ ಕವಯತ್ರಿ ಪ್ರತಿಭಾನಂದಕುಮಾರ್ ಅವರು ತಮ್ಮ `ಅನುದಿನದ ಅಂತರಗಂಗೆ' ಆತ್ಮಕಥೆಯ ಬಗ್ಗೆ ಮಾತನಾಡಿದರು. ತಮಗಿದ್ದ ದಂತದ ವಕ್ರತೆಯಿಂದ ತಾವು ಅನುಭವಿಸಿದ ಕೀಳರಿಮೆ, ಆತ್ಮವಿಶ್ವಾಸದ ಕೊರತೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದರು. ನಂತರ ಅವರು ಅದನ್ನು ಮೀರಿ ಬೆಳೆದ ಬಗೆಗೆ ವಿವರಿಸಿದರು.

ಎ.ಎಂ. ಮದರಿ ಅವರು ತಮ್ಮ `ಗೊಂದಲಿಗ್ಯ' ಎಂಬ ತಮ್ಮ ಆತ್ಮಕಥೆಯ ವಿವರ ನೀಡಿದರು. ಅಲೆಮಾರಿ ಜನಾಂಗವಾದ ಗೊಂದಲಿಗರ ನೋವು ನಲಿವನ್ನು ಇದೇ ವೇಳೆ ಹಂಚಿಕೊಂಡರು.

ಒಟ್ಟಾರೆ ತಾವೇ ಬರೆದ ಆತ್ಮಕಥೆಯ ಬಗೆಗೆ ವಿವರಿಸಿದ್ದು ಈ ಗೋಷ್ಠಿಯ ವಿಶೇಷತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT