ಗುಡಗಾಂವ್ (ಐಎಎನ್ಎಸ್): ಕ್ಷೇತ್ರದಲ್ಲಿರುವ ನಕಲಿ ಮತಗಳ ಬಗ್ಗೆ ಚುನಾವಣಾ ಆಯೋಗವು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಗುಡಗಾಂವ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯೋಗೇಂದ್ರ ಯಾದವ್ ಅವರು ಗುರುವಾರ ಮನವಿ ಮಾಡಿದ್ದಾರೆ.
‘ಗುಡಗಾಂವ್ನಲ್ಲಿ ನಕಲಿ ಮತಗಳ ದೊಡ್ಡ ಜಾಲವೇ ಇದೆ. ಹರಿಯಾಣದ ಕ್ರೀಡೆ ಮತ್ತು ಯುವಜನ ಸಚಿವ ಸುಖ್ಬೀರ್ ಸಿಂಗ್ ಕಠಾರಿಯಾ ಅವರು ಇಂತಹ ಕುತಂತ್ರಗಳಿಗೆ ಕುಖ್ಯಾತಿ ಪಡೆದಿದ್ದಾರೆ ಮತ್ತು ಈ ಸಂಬಂಧ ಕ್ರಿಮಿನಲ್ ಮೊಕದ್ದಮೆಗಳನ್ನೂ ಎದುರಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.