ನವದೆಹಲಿ (ಪಿಟಿಐ): ಮಹಿಳೆಯರು ಮತ್ತು ಮಕ್ಕಳನ್ನು ಮುಂದಿಟ್ಟುಕೊಂಡು ಅವರ ಮರೆಯಲ್ಲಿ ನಿಂತು ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗಕ್ಕೆ ಇಳಿಯುವ ಹೊಸ ತಂತ್ರವನ್ನು ನಕ್ಸಲೀಯರು ಅನುಸರಿಸುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ತಮ್ಮ ನಾಯಕರನ್ನು ಬಿಡುಗಡೆಗೊಳಿಸಲು ಅಪಹರಣದಂತಹ ಮಾರ್ಗಗಳನ್ನೂ ಬಳಸುತ್ತಿದ್ದಾರೆ ಎಂದು ಗೃಹ ಖಾತೆು ರಾಜ್ಯ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು.