ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ : ಅ.13 ಮತ್ತು 14 (ಶನಿವಾರ ಮತ್ತು ಭಾನುವಾರ) ಕಾರ್ಯಕ್ರಮಗಳು

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಶನಿವಾರ ಮತ್ತು ಭಾನುವಾರ

ಸುಚೇತನಾ ಕಲಾವಿದರು: ಎ.ಜೀಸ್ ಕಲಾಶ್ರೀ ಸಭಾಂಗಣ, ನಂ 12, 14ನೇ ಮುಖ್ಯರಸ್ತೆ, 9ನೇ ಬ್ಲಾಕ್, ನಾಗರಭಾವಿ 2ನೇ ಹಂತ. ಶನಿವಾರ ಬೆಳಿಗ್ಗೆ 10ಕ್ಕೆ ಸಿದ್ದಗಂಗಾಮಠದ ಶಿವಕುಮಾರ ಸ್ವಾಮೀಜಿ `ಎ.ಜೀಸ್ ಕಲಾಶ್ರೀ ಯುವ ವೇದಿಕೆ~ ಉದ್ಘಾಟಿಸಲಿದ್ದಾರೆ. ಭಾನುವಾರ ಸಂಜೆ 4.30ಕ್ಕೆ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರಿಂದ `ಮಕ್ಕಳ ಲಾಲನೆ-ಪಾಲನೆ ಮತ್ತು ಪೋಷಕರ ಪಾತ್ರ~ ಕುರಿತು ವಿಚಾರ ವಿನಿಮಯ. ಅತಿಥಿ- ಕಿರುತೆರೆ ನಟಿ ಮಾಲತಿ ಸರದೇಶಪಾಂಡೆ.

ಕೆನ್ ಶಾಲೆ: ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 10.30ರಿಂದ ಶೇಷಾದ್ರಿಪುರಂ ಕೆನ್ ಶಾಲಾ ಆವರಣದಲ್ಲಿ 3ಡಿ ಛಾಯಾಚಿತ್ರ ಪ್ರದರ್ಶನ. ಉಚಿತ ಪ್ರವೇಶ. ಸಂಪರ್ಕಕ್ಕೆ- 95352 25446

ಧಾರ್ಮಿಕ ಕಾರ್ಯಕ್ರಮಗಳು
ಶ್ರೀಮದಾನಂದತೀರ್ಥ ಪ್ರವಚನ ಸಮಿತಿ
: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡರಸ್ತೆ, ಅಮರಜ್ಯೋತಿ ನಗರ. ಶನಿವಾರ ಮತ್ತು ಭಾನುವಾರ ಕಲ್ಲಾಪುರ ಪವಮಾನಾಚಾರ್ಯ ಅವರಿಂದ `ಗರುಡ ಪುರಾಣ~ ಪ್ರವಚನ. ಸಂಜೆ 7.

ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತ ಮಂಡಳಿ: ಕುಚಲಾಂಬ ಸಾಂಸ್ಕೃತಿಕ ಮಂದಿರ, 9ನೇ ಬ್ಲಾಕ್ ಜಯನಗರ. ಶನಿವಾರ ಆರ್.ಮಂಜುನಾಥ್ ಅವರಿಂದ ಆರೋಗ್ಯ ಕಾರ್ಯಕ್ರಮ. ಭಾನುವಾರ ವಸುಧಾ ಅವರಿಂದ ದೇವರ ನಾಮಗಳು. ಸಂಜೆ 6.30.

ರಂಗಭೂಮಿ
ರಂಗಶಂಕರ
: 2ನೇ ಹಂತ, ಜೆ.ಪಿ.ನಗರ. ಶನಿವಾರ ಮತ್ತು ಭಾನುವಾರ `ದಿ ಕಟ್ಕತಾ ಪೊಪೆಟ್ ಆರ್ಟ್ಸ್ ಟ್ರಸ್ಟ್~ ತಂಡದಿಂದ `ಬಾಲಿವುಡ್ ಬ್ಯಾಂಡ್‌ವ್ಯಾಗನ್~ ನಾಟಕ ಪ್ರದರ್ಶನ. ನಿರ್ದೇಶನ- ಅನುರೂಪ ರಾಯ್. ಸಂಜೆ 7.30. (ಭಾನುವಾರ ಮಧ್ಯಾಹ್ನ 3.30).

ರಿನೈಸನ್ಸ್: ರಿನೈಸನ್ಸ್ ಗ್ಯಾಲರಿ, ನಂ 104, ಕನ್ನಿಂಗ್‌ಹ್ಯಾಮ್ ರಸ್ತೆ. ಶನಿವಾರ ಮತ್ತು ಭಾನುವಾರ ಅಶ್ವಿನಿ ರಾವ್, ದೀಪ್ತಿ ರಘುರಾಮ್, ಭಾಸ್ಕರ್ ರಾವ್, ಜಿ. ಜಗದೀಶ್, ಮಿಲಿಂದ್ ನಾಯಕ್, ಸ್ವಾಮಿ ನಾಯಕ್ ಅವರ ಕಲಾ ಪ್ರದರ್ಶನ. ಬೆಳಿಗ್ಗೆ 11.

ಸೋಲ್ ಆರ್ಟ್ ಗ್ಯಾಲರಿ: ಕರ್ನಾಟಕ ಚಿತ್ರಕಲಾ ಪರಿಷತ್ತು, ಗ್ಯಾಲರಿ ನಂ. 4, ಆರ್ಟ್ ಕಾಂಪ್ಲೆಕ್ಸ್, ಕುಮಾರಕೃಪಾ ರಸ್ತೆ. ಶನಿವಾರ ಮತ್ತು ಭಾನುವಾರ ಸುರೇಖಾ ಎಚ್.ಎಂ. ಅವರ ಚಿತ್ರಕಲಾ ಪ್ರದರ್ಶನ. ಸಂಜೆ 6.

ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ: ಕಿ.ರಂ. ನುಡಿಮನೆ, ನಂ.36, ಬಿ.ವಿ. ಕಾರಂತ ರಸ್ತೆ, ಬನಶಂಕರಿ 2ನೇ ಹಂತ. ಶನಿವಾರ `ಗೀತರಾಕ್ಷಸ~ ನಾಟಕ ಪ್ರದರ್ಶನ. ನಿರ್ದೇಶನ- ಎಸ್.ಕೆ. ಮಾಧವರಾವ್, ರಚನೆ- ಪರ್ವತರಾಣಿ. ಸಂಜೆ 5.30. ಪ್ರಕಾಶ್ ಬೆಳವಾಡಿ ನಿರ್ದೇಶನದ `ಬಿಯಾಂಡ್ ದಿ ಲ್ಯಾಂಡ್ ಆಫ್ ಹತ್ತಮಾಲಾ~ ನಾಟಕ ಶನಿವಾರ ಮತ್ತು ಭಾನುವಾರ  ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ.

ಶಂಕರ ಜಯಂತಿ ಮಂಡಳಿ: ಶಂಕರಕೃಪಾ, ನಂ.45, ಶಂಕರ ಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಶನಿವಾರ ಸುದರ್ಶನ ಶರ್ಮಾ ಅವರಿಂದ ಕರ್ಮೋಪಾಸನ ಪ್ರಕ್ರಿಯೆ.

ಭಾನುವಾರ ಶಿವರಾಮ ಅಗ್ನಿಹೋತ್ರಿ ಅವರಿಂದ `ಸಮಾರೋಪ ಮತ್ತು ಸಾಧನ ಸಿದ್ಧಾಂತ ಪ್ರಕ್ರಿಯಾ~ ಕುರಿತು ಉಪನ್ಯಾಸ. ಸಂಜೆ 6.30.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ನಂ. 6, ಎ.ಪಿ.ಕೆ.ರಸ್ತೆ, 2ನೇ ಬ್ಲಾಕ್, ತ್ಯಾಗರಾಜನಗರ. ಶನಿವಾರ ಮತ್ತು ಭಾನುವಾರ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ ಅವರಿಂದ `ಶ್ರೀಮದ್ಭಗವದ್ಗೀತೆಯ 11ನೇ ಅಧ್ಯಾಯ~ ಪ್ರವಚನ. ಬೆಳಿಗ್ಗೆ 9.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT