ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು, 06 ಮಂಗಳವಾರ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ: ಮಂಡಳಿಯ ಸಮ್ಮೇಳನ ಸಭಾಂಗಣ, ಅರಮನೆ ರಸ್ತೆ. `ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ~ ಕುರಿತ ವಿಚಾರ ಸಂಕಿರಣ. ಅತಿಥಿ- ಸಚಿವ ಡಾ.ವಿ.ಎಸ್.ಆಚಾರ್ಯ. ಬೆಳಿಗ್ಗೆ 10.30.

ಕರ್ನಾಟಕ ನಾಟಕ ಅಕಾಡೆಮಿ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಕೋಲಾಚಲಂ ಶ್ರೀನಿವಾಸರಾವ್ ಅವರ `ದಿ ಡ್ರಮಾಟಿಕ್ ಹಿಸ್ಟರಿ ಆಫ್ ದ ವರ್ಲ್ಡ್~ ಪುಸ್ತಕ ಬಿಡುಗಡೆ ಸಮಾರಂಭ. ಅತಿಥಿಗಳು- ಸಚಿವ ಗೋವಿಂದ ಎಂ.ಕಾರಜೋಳ, ನಾಟಕಕಾರ ಡಾ.ಗಜಾನನ ಶರ್ಮ, ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ. ಸಂಜೆ 6.

ಆಲ್ ಅಮೀನ್ ಎಜುಕೇಷನ್ ಸೊಸೈಟಿ: ಆಲ್-ಅಮೀನ್ ಟವರ್ಸ್‌, ಹೊಸೂರು ರಸ್ತೆ. ಸಂಸ್ಥಾಪಕ ದಿನಾಚರಣೆ. ಅತಿಥಿಗಳು- ಸಿದ್ಧಲಿಂಗ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ, ಶಾಸಕರಾದ ಡಾ.ಮುಮ್ತಾಜ್ ಆಲಿಖಾನ್, ಆರ್.ರೋಷನ್ ಬೇಗ್. ಸಂಜೆ 7.

ಅಖಿಲ ಭಾರತ ಮಾಧ್ವ ಮಹಾ ಮಂಡಲ ಪಬ್ಲಿಕೇಷನ್ ಟ್ರಸ್ಟ್: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ತರಿಗುಪ್ಪೆ ಮುಖ್ಯ ರಸ್ತೆ. ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರಿಂದ ಆನಂದ ತೀರ್ಥ ವಿರಚಿತ `ಸರ್ವ ಮೂಲ ಗ್ರಂಥ ಬ್ರಹ್ಮಸೂತ್ರ ಭಾಷ್ಯ~ ಕೃತಿ ಬಿಡುಗಡೆ. ಸಂಜೆ 6.30.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ: ಕೆಂಪೇಗೌಡ ರಸ್ತೆ. `ಕಾರ್ಮಿಕರ ಕಾನೂನಿನ ಪ್ರಾಮುಖ್ಯತೆ~ ವಿಚಾರ ಸಂಕಿರಣ. ಅತಿಥಿ- ಕಾರ್ಮಿಕ ಇಲಾಖೆ ಆಯುಕ್ತ ಎಸ್.ಆರ್.ಉಮಾಶಂಕರ. ಬೆಳಿಗ್ಗೆ 10.30.

ಭಾರತೀಯ ಜೀವ ವಿಮಾ ನಿಗಮ: ಓರಿಯಂಟಲ್ ಬಿಲ್ಡಿಂಗ್ಸ್, ಅನಿಲ್ ಕುಂಬ್ಳೆ ವೃತ್ತ, ಎಂ.ಜಿ.ರಸ್ತೆ. 55ನೇ ವರ್ಷಾಚರಣೆಯ ಪ್ರಯುಕ್ತ ಸಿಬ್ಬಂದಿಯಿಂದ ಮಾನವ ಸರಪಳಿ. ಸಂಜೆ 5.30.

ರಂಗದರ್ಶಿ
ರಂಗಶಂಕರ: ಜೆ ಪಿ ನಗರ 2ನೇ ಹಂತ. ಸಮಷ್ಠಿ ತಂಡದಿಂದ `ಮಿಸ್ ಸದಾರಮೆ~ ಕನ್ನಡ ನಾಟಕ ಪ್ರದರ್ಶನ. ರಚನೆ- ಕೆ.ವಿ.ಸುಬ್ಬಣ್ಣ, ನಿರ್ದೇಶನ- ಮಂಜುನಾಥ ಬಡಿಗೇರ್. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ
ಚಕ್ರೇಶ್ವರಿ ಮಹಿಳಾ ಸಮಾಜ: ಆದಿನಾಥ ದಿಗಂಬರ ಜಿನ ಮಂದಿರ, ಸೌತ್ ಎಂಡ್ ವೃತ್ತ, ಜಯನಗರ. ದಶಲಕ್ಷಣ ಮಹಾಪರ್ವ ಪ್ರವಚನದಲ್ಲಿ ಜ್ವಾಲಿನಿ ಮಹಾವೀರ್ ಅವರಿಂದ `ಉತ್ತಮ ಸತ್ಯಧರ್ಮ~ ಕುರಿತು ಪ್ರವಚನ. ಸಾನ್ನಿಧ್ಯ- ಪಾವನಕೀರ್ತಿ ಮಹಾರಾಜರು. ಮಧ್ಯಾಹ್ನ 2.30

ಧ್ಯಾನ ಮತ್ತು ವ್ಯಾಸಂಗ ವೃತ್ತ: ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜು, ಜಯನಗರ `ಟಿ~ ಬ್ಲಾಕ್. ಡಾ. ಶ್ರೀರಾಮ ಭಟ್ ಅವರಿಂದ `ಷಡ್ದರ್ಶನಗಳು~ ಕುರಿತು ಉಪನ್ಯಾಸ. ಸಂಜೆ 6.30.

ನಂಜನಗೂಡು ರಾಘವೇಂದ್ರಸ್ವಾಮಿಗಳ ಮಠ: ಶೇಷಾದ್ರಿಪುರ. ವಿದ್ವಾನ್ ರವಿ ಆಚಾರ್ಯ ಅವರಿಂದ `ರಾಮಾಯಣ~ ಪ್ರವಚನ. ಸಂಜೆ 6.30.

ಕರ್ನಾಟಕ ಹರಿದಾಸ ಸೈಂಟಿಫಿಕ್ ರೀಸರ್ಚ್ ಸೆಂಟರ್: ವಿಜಯರಂಗ, 17ನೇ ಅಡ್ಡರಸ್ತೆ, ವಿಜಯನಗರ. ಹರಿಕಥಾಮೃತ ಸಾರ ಜ್ಞಾನ ಸತ್ರ ಕಾರ್ಯಕ್ರಮ. ಅತಿಥಿ- ಡಾ.ರಂಗನಾಥ್ ಭಾರದ್ವಾಜ್. ಸಂಜೆ 5.30.

ಮದಾನಂದತೀರ್ಥ ಪ್ರವಚನ ಸಮಿತಿ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡ ರಸ್ತೆ, ಅಮರಜ್ಯೋತಿ ನಗರ. ಹೊಳವನಹಳ್ಳಿ ಶ್ರೀನಿವಾಸಾಚಾರ್ಯ ಅವರಿಂದ `ಪ್ರೋಷ್ಠಪದಿ ಭಾಗವತ~ ಪ್ರವಚನ. ಸಂಜೆ 7.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ. ನರಸಿಂಹರಾಜ ಕಾಲೋನಿ. ಗಣೇಶ ಭಟ್ಟ ಹೋಬಳಿ ಅವರಿಂದ `ಭಗವದ್ಗೀತೆ~ ಉಪನ್ಯಾಸ. ಸಂಜೆ 6.30.

ರಾಗಿಗುಡ್ಡದ  ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: 9ನೇ ಬ್ಲಾಕ್, ಜಯನಗರ. ಮಂಜುನಾಥ್ ಭಟ್ ವಿನಾಯಕ ಅವರಿಂದ `ವೇದಾಂತ ಪರಿಭಾಷೆಗಳು ಮತ್ತು ಪರಿಚ್ಛೇದಗಳು~ ಕುರಿತು ಪ್ರವಚನ. ಸಂಜೆ 6.30.

ದೇವಗಿರಿ ಗುರುಸೇವಾ ಸಮಿತಿ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಅಂಬರೀಷಾಚಾರ್ಯ ಅವರಿಂದ `ದ್ವಾದಶ ಸ್ತೋತ್ರ ಹಾಗೂ ಪ್ರೋಷ್ಠಪದಿ~ ಪ್ರವಚನ. ಸಂಜೆ 7.

ಬ್ರಾಹ್ಮಣ ವಿದ್ಯಾರ್ಥಿ ಸಹಾಯ ಸಂಘ: ಎನ್.ಎಸ್.ಅಯ್ಯಂಗಾರ್ ರಸ್ತೆ, ಶೇಷಾದ್ರಿಪುರ. ಎಂ.ಪ್ರವೀಣ್ ಕುಮಾರ್ ಮತ್ತು ತಂಡದಿಂದ ಸಂಗೀತ. ಸಂಜೆ 6.

ಗಣೇಶ ಮಂದಿರ: ತ್ಯಾಗರಾಜ ನಗರ. ಸಹಸ್ರನಾಮ ದೀಪ ಪೂಜಾ-ಅರ್ಚನೆ. ಸಂಜೆ 6.30. 
ಕೋದಂಡರಾಮ ದೇವಸ್ಥಾನ ಸಮಿತಿ: ಶ್ರೀರಾಮಮಂದಿರ ರಸ್ತೆ, ಸಂಪಂಗಿ ರಾಮನಗರ. ಮಂತ್ರಾಕ್ಷತೆ ಅಲಂಕಾರ. ಬೆಳಿಗ್ಗೆ 6.

ವಿನಾಯಕ ಸೇವಾ ಸಮಿತಿ: 7ನೇ `ಬಿ~ ಮುಖ್ಯ ರಸ್ತೆ, ಜಯನಗರ 4ನೇ ಬಡಾವಣೆ. ಸ್ವಾಮಿಗೆ ಅಭಿಷೇಕ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ. ಬೆಳಿಗ್ಗೆ 6.30. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ `ಚಕ್ರ ಚಂಡಿಕೆ~ ಸಾಲಿಗ್ರಾಮ ಮೇಳದಿಂದ ಯಕ್ಷಗಾನ ಪ್ರದರ್ಶನ.  ಸಂಜೆ 7.

ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ:  2ನೇ ಮುಖ್ಯ ರಸ್ತೆ, ಅರಮನೆ ನಗರ. ಕಡುಬು ಅಲಂಕಾರ.  ಬೆಳಿಗ್ಗೆ 8.

ವಿದ್ಯಾರಣ್ಯ ಯುವಕ ಸಂಘ: ಎಪಿಎಸ್ ಕಾಲೇಜು ಮೈದಾನ, ಬಸವನಗುಡಿ. ಗಣೇಶ ಉತ್ಸವದಲ್ಲಿ ಸಲೀಂ-ಸುಲೈಮಾನ್ ತಂಡದಿಂದ ಸಂಗೀತ. ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT