ಅಕ್ಟೋಬರ್ 9, ಭಾನುವಾರ
ರಂಗ ಸೇವಾ ಟ್ರಸ್ಟ್: ಮಾಗಡಿ. ಶ್ರೀರಂಗನಾಥ ಸ್ವಾಮಿ ಮಹೋತ್ಸವ ಮತ್ತು ಟ್ರಸ್ಟ್ನ ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಸಾನ್ನಿಧ್ಯ- ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ. ಅತಿಥಿಗಳು- ಶಾಸಕ ಎಚ್.ಸಿ.ಬಾಲಕೃಷ್ಣ, ಸಂಸದ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಸಿ.ಪಿ.ಯೋಗೀಶ್ವರ್, ಡಾ.ವಿ.ಎಸ್.ಆಚಾರ್ಯ, ಶೋಭಾ ಕರಂದ್ಲಾಜೆ. ಬೆಳಿಗ್ಗೆ 11.30.
ದಲಿತ/ಅಲ್ಪ ಸಂಖ್ಯಾತರ ಸಂರಕ್ಷಣಾ ಸೇನೆ: ಕೃಷ್ಣ ಸಭಾಂಗಣ, ಅಯ್ಯಪ್ಪನಗರ, ಕೆ.ಆರ್.ಪುರ. ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧಾ ಕಾರ್ಯಕ್ರಮ. ಉದ್ಘಾಟನೆ- ಸಚಿವ ವರ್ತೂರು ಆರ್.ಪ್ರಕಾಶ್. ಅತಿಥಿಗಳು- ಶಾಸಕ ಎನ್.ಎ.ಹ್ಯಾರೀಸ್, ಎನ್.ಸಂಪಂಗಿ. ಮಧ್ಯಾಹ್ನ 2.30.
ಆರ್ಯ ಈಡಿಗರ ಸಂಘ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ತ್ರಿಜನ್ಮ ಮೋಕ್ಷ ಪೌರಾಣಿಕ ನಾಟಕ ಪ್ರದರ್ಶನ. ಉದ್ಘಾಟನೆ- ಶೋಭಾ ಕರಂದ್ಲಾಜೆ. ಅತಿಥಿಗಳು- ಕರ್ನಾಟಕ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಎಂ.ತಿಮ್ಮೇಗೌಡ, ಶಾಸಕರಾದ ಎಚ್.ಹಾಲಪ್ಪ, ಸುರೇಶ್ ಗೌಡ, ಉಪಮೇಯರ್ ಎಸ್.ಹರೀಶ್. ಬೆಳಿಗ್ಗೆ 10.
ವೇಣುಗೋಪಾಲಸ್ವಾಮಿ ಎಜುಕೇಷನ್ ಟ್ರಸ್ಟ್: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಡಿ.ವಿ.ಜಿ ಮತ್ತು ಮೈಸೂರು ವಾಸುದೇವಾಚಾರ್ಯ ಅವರ ಕೃತಿಗಳ ಸಿ.ಡಿ. ಬಿಡುಗಡೆ ಕಾರ್ಯಕ್ರಮ. ಅತಿಥಿಗಳು- ಸಚಿವ ಆರ್.ಅಶೋಕ, ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಮಹೇಶ್ ಜೋಶಿ. ಸಂಜೆ 5.30.
ರಾಷ್ಟ್ರೀಯ ಸೇವಾ ಯೋಜನೆ: ವೀರಭದ್ರ ಸ್ವಾಮಿ ಸಮುದಾಯ ಭವನ, ಮಲ್ಲಸಂದ್ರ. ಬಾಲಕರ ವ್ಯಕ್ತಿತ್ವ ವಿಕಸನ ಶಿಬಿರ. ಉದ್ಘಾಟನೆ- ಶಾಸಕ ಎಸ್.ಆರ್.ವಿಶ್ವನಾಥ. ಅತಿಥಿಗಳು- ಪ್ರಾಂಶುಪಾಲರಾದ ಎಸ್.ಬಿ.ರವಿಕಲಾ, ವಕೀಲ ಎಲ್.ಕಾಳಪ್ಪ. ಸಂಜೆ 4.
ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಪಿ.ವಾಡಿಯಾ ರಸ್ತೆ. ಸುಗಮ ಸಂಗೀತ ಕಾರ್ಯಕ್ರಮ- ಎ.ಎನ್.ರಶ್ಮಿ. ಬೆಳಿಗ್ಗೆ 10.30.
ಸಮ್ಮಿಲನ: ವಲ್ಲಭನಿಕೇತನ, ಶಿವಾನಂದ ವೃತ್ತ ಸಮೀಪ. ಕವಿಗೋಷ್ಠಿ ಮತ್ತು ಗೀತ ಗಾಯನ. ಬೆಳಿಗ್ಗೆ 10.30.
ರಂಗದರ್ಶಿ
ಸಂಚಯ ತಂಡ: ರಂಶಂಕರ, ಜೆ.ಪಿ.ನಗರ 2ನೇ ಹಂತ. ತದ್ರೂಪಿ ನಗೆ ನಾಟಕ ಪ್ರದರ್ಶನ. ಮಧ್ಯಾಹ್ನ 3.30.
ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ: ಕುಮಾರಸ್ವಾಮಿ ಬಡಾವಣೆ. ಜಿ.ವಿ.ಅಯ್ಯರ್ ನಿರ್ದೇಶನ `ಭೂದಾನ~ ಸಿನಿಮಾ ಪ್ರದರ್ಶನ. ಮಧ್ಯಾಹ್ನ 3.30.
ಕಲಾವೇದಿಕೆ ಟ್ರಸ್ಟ್: ಕೆ.ಎಚ್.ಕಲಾಸೌಧ, ಹನುಮಂತನಗರ. ಕಲಾ ಗಂಗೋತ್ರಿ ತಂಡದಿಂದ ಮೈಸೂರು ಮಲ್ಲಿಗೆ ನಾಟಕ ಪ್ರದರ್ಶನ. ಸಂಜೆ 7.
ಧಾರ್ಮಿಕ ಕಾರ್ಯಕ್ರಮ
ಯಲ್ಲಮ್ಮ ದೇವಿಯ ದೇವಾಲಯ: ಸುಂಕೇನಹಳ್ಳಿ. ವಾರ್ಷಿಕೋತ್ಸವದ ಪ್ರಯುಕ್ತ ಗಣಪತಿ, ನವಗ್ರಹ, ದುರ್ಗಾಹೋಮ. ಮಧ್ಯಾಹ್ನ 12.30.
ಪ್ರಸನ್ನ ವೀರಾಂಜನೇಯಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿಪುರ. ಭಜನೆ ಕಾರ್ಯಕ್ರಮ. ಬೆಳಿಗ್ಗೆ 9.
ದೇವಗಿರಿ ಗುರುಸೇವಾ ಸಮಿತಿ: ಬನಶಂಕರಿ 2ನೇ ಹಂತ. ಡಾ.ಮಾಳಗಿ ರಾಮಾಚಾರ್ಯ ಅವರಿಂದ ಮಹಾಭಾರತ ಕುರಿತು ಉಪನ್ಯಾಸ. ಸಂಜೆ 6.30.
ಸತ್ಯ ಸಾಯಿ ಸೇವಾ ಕ್ಷೇತ್ರ: 21ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಜೆ.ಪಿ.ನಗರ. ಅಖಂಡ ಭಜನೆ ಕಾರ್ಯಕ್ರಮ. ಮಧ್ಯಾಹ್ನ 2.
ಅಸ್ಸಿಸಿಯಾ ಸಂತ ಫ್ರಾನ್ಸಿಸ್ರ ದೇವಾಲಯ: ಕೆಂಗೇರಿ ಉಪನಗರ. ಬರ್ನಾಡ್ ಮೋರೇಸ್ ಅವರಿಂದ ಹಬ್ಬದ ಆಡಂಬರ ಪೂಜೆ. ಬೆಳಿಗ್ಗೆ 9.
ಕಾಳಿಕ ದುರ್ಗಾಪರಮೇಶ್ವರಿ ದೇವಸ್ಥಾನ: ವಿದ್ಯಾರಣ್ಯಪುರ. ಸೀತಾ ಸತ್ಯನಾರಾಯಣ ಅವರಿಂದ ಕರ್ನಾಟಕ ಸಂಗೀತ. ಸಂಜೆ 6.30.
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಡಿ.ವಿ.ಜಿ. ಸಭಾಂಗಣ, ಬಸವನಗುಡಿ ರಸ್ತೆ. ಡಿವಿಜಿ ಪುಣ್ಯಸ್ಮರಣೆ ಪ್ರಯುಕ್ತ ಡಾ.ಶ್ರೀರಾಮಭಟ್ ಅವರಿಂದ ಡಿವಿಜಿ ಅವರ ಕಾವ್ಯಶೈಲಿ ಕುರಿತು ಉಪನ್ಯಾಸ. ಸಂಜೆ 6.
ತಿರುಮಲ ತಿರುಪತಿ ದೇವಸ್ಥಾನ: ವೈಯಾಲಿಕಾವಲ್. ಆರ್.ಜೆ. ಸಂತೋಷಿ ಅವರಿಂದ ಗೀತೋಪನ್ಯಾಸ. ಸಂಜೆ 6.
ರಾಗಿಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: 9ನೇ ಬ್ಲಾಕ್ ಜಯನಗರ. ಐಶ್ವರ್ಯ ಅವರಿಂದ ಭಕ್ತಿಗೀತೆ ಕಾರ್ಯಕ್ರಮ. ಸಂಜೆ 6.
ವೇದಾಂತ ಸತ್ಸಂಗ ಕೇಂದ್ರ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್, ಬಸವನಗುಡಿ. ಛಾಂದೋಗ್ಯೋಪನಿಷತ್ ಕುರಿತು ಪ್ರವಚನ. ಬೆಳಿಗ್ಗೆ 9.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.