ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು - ಜನವರಿ 10, ಮಂಗಳವಾರ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಜನವರಿ 10, ಮಂಗಳವಾರ
ರಾಜ್ಯ ಪದ್ಮಶಾಲಿ ನೌಕರರ ಸಂಘ:
ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಸನ್ಮಾನ ಸಮಾರಂಭ, ಉದ್ಘಾಟನೆ- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ಕೆ. ನಲ್ಲೂರು ಪ್ರಸಾದ್, ಅಧ್ಯಕ್ಷತೆ- ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಅತಿಥಿಗಳು- ಸಂಘದ ಅಧ್ಯಕ್ಷ ಕೆ.ಜಿ.ಲಕ್ಷ್ಮಿನಾರಾಯಣಪ್ಪ, ಸಂಜೆ 4.

ಎನರ್ಜಿ ಅಂಡ್ ರಿಸೋರ‌್ಸಸ್ ಇನ್‌ಸ್ಟಿಟ್ಯೂಟ್: ಫಾರ್ಚುನ್ ಪಾರ್ಕ್, ಜೆಪಿ ಸೆಲೆಸ್ಟಿಯಲ್ ಹೊಟೇಲ್, ವಿಚಾರ ಸಂಕಿರಣ: `ಐಸಿಟಿ ಸಸ್ಟೈನೆಬಲ್ ಫಾರ್ ಡೆವಲಪ್‌ಮೆಂಟ್- ದಿ ರೋಡ್ ಅಹೆಡ್~. ಅತಿಥಿಗಳು- ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ ನಿರ್ದೇಶಕ ವಿ.ಎಸ್.ಪ್ರಕಾಶ್, ಎಂ.ಎನ್.ವಿದ್ಯಾಶಂಕರ್, ಪಿ.ಆರ್.ದಾಸ್‌ಗುಪ್ತ, ರಂಜನ ಸೈಕಿಯ, ಬೆಳಿಗ್ಗೆ 9.30.

ಉಚಿತ ಕನ್ನಡಕ ವಿತರಣೆ ಮತ್ತು ರಕ್ತದಾನ ಶಿಬಿರ: ಆಯೋಜನೆ: ಬ್ಯಾಟರಾಯನಪುರ ವಿಧಾನಸಭಾಕ್ಷೇತ್ರ ಜನತಾದಳದ ಪ್ರಧಾನ ಕಾರ್ಯದರ್ಶಿ ಎನ್. ವೇಣುಗೋಪಾಲ್, ಅತಿಥಿಗಳು- ಮಾಜಿ ಸಂಸತ್ ಸದಸ್ಯ ಸಿ.ನಾರಾಯಣಸ್ವಾಮಿ, ಮಾಜಿ ಸಚಿವ ಆರ್.ಕೃಷ್ಣಪ್ಪ, ಮಾಜಿ ಶಾಸಕ ಜಿ.ಚಂದ್ರಣ್ಣ, ಬೆಳಿಗ್ಗೆ 11.

ನಾರಾಯಣ ನೇತ್ರಾಲಯ: ಕ್ಯಾಸಲ್ ಸ್ಟ್ರೀಟ್, ಅಶೋಕ ನಗರ, ಸೇಕ್ರೆಡ್ ಹಾರ್ಟ್ ಚರ್ಚ್ ಎದುರು, ಪೊಲೀಸ್ ವಿಷನ್- ಅವರ್ ಮಿಶನ್‌ನ ಉದ್ಘಾಟನೆ, ಅತಿಥಿಗಳು-ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ, ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ನಿದೇಶಕ ಡಾ.ಕೆ.ಭುಜಂಗ ಶೆಟ್ಟಿ, ಬೆಳಿಗ್ಗೆ 10.30.

ಹೊಯ್ಸಳ ಕರ್ನಾಟಕ ಸಂಘ:  ಸಂಘದ ಆವರಣ, 3ನೇ ಅಡ್ಡರಸ್ತೆ, ಹೊಂಬೇಗೌಡ ನಗರ, ಡಾ.ಎಸ್.ಎಲ್. ಭೈರಪ್ಪನವರಿಗೆ ಅಭಿನಂದನಾ ಸಮಾರಂಭ,  ಸಂಜೆ.5.30

ದೇಗುಲ ದರ್ಪಣ: ಎ.ಡಿ.ಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು, ದೇಗುಲ ದರ್ಪಣ ಲೋಕಾರ್ಪಣೆ ಸಮಾರಂಭ, ಉದ್ಘಾಟನೆ: ನೃಸಿಂಹಾಶ್ರಮ ಸ್ವಾಮೀಜಿ, ಲೋಕಾರ್ಪಣೆ: ಸಾಹಿತಿ ಡಾ.ಎಂ.ಚಿದಾನಂದಮೂರ್ತಿ, ಅತಿಥಿಗಳು: ಧರ್ಮದರ್ಶಿ ಹರಿಕೃಷ್ಣ ಪುನರೂರು, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಎನ್.ವಾಸುದೇವ್ ಅಡಿಗ, ಸಂಜೆ 6.

ಸಾಂಸ್ಕೃತಿಕ ಕಾರ್ಯಕ್ರಮಗಳು
ಮಕ್ಕಳ ನಾಟಕ

ಹನುಮಂತ ನಗರ ಬಿಂಬ: `ತಿರ‌್ಗಾ ಮುರ‌್ಗಾ~ ಮಕ್ಕಳ ವಿನೂತನ ನಾಟಕ. ಅತಿಥಿಗಳು: ಎಚ್.ಜಿ. ಸೋಮಶೇಖರ ರಾವ್, ಭಾರ್ಗವಿ ನಾರಾಯಣ್, ವಿಕಾಸ್ ನೇಗಿಲೋಣಿ, ಎ.ಎಸ್. ಮೂರ್ತಿ.ಸ್ಥಳ: ಕೆ.ಎಚ್.ಕಲಾಸೌಧ, ಹನುಮಂತನಗರ. ಸಂಜೆ: 7.

ಮಹಾಶಿವಪೂಜೆ
ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ: ಬೆಳಿಗ್ಗೆ 7 ಗಂಟೆಯಿಂದ ಧನುರ್ಮಾಸದ ಮಹಾಶಿವಪೂಜೆ . ಸಂಜೆ 5.30ಕ್ಕೆ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳಿಂದ ಪ್ರಾಸ್ತಾವಿಕ ನುಡಿ. ಸ್ಥಳ: ಎಸ್.ಬಿ.ಎನ್. ಹಾಲ್ ನಂ.76, ಬಸವನಗುಡಿ ರಸ್ತೆ.

ಪ್ರವಚನ
ಗೀತಾ ಜ್ಞಾನ ಯಜ್ಞ: ಅಭಯಚೈತನ್ಯ ಸ್ವಾಮೀಜಿ ಅವರಿಂದ ಶ್ರೀಮದ್ ಭಗವದ್ಗೀತಾ ಭಕ್ತಿಯೋಗದ 12ನೇ ಅಧ್ಯಾಯದ ಪ್ರವಚನ. ಸ್ಥಳ: ಶ್ರೀರಾಮ ಸೇವಾ ಮಂಡಳಿ, 10ನೇ ಅಡ್ಡರಸ್ತೆ, ಹೊಂಬೇಗೌಡ ನಗರ, ವಿಲ್ಸನ್ ಗಾರ್ಡನ್. ಸಂಜೆ 6.30.

ನಾಟಕ ಪ್ರದರ್ಶನ
ಗುರುಕನಕ ಶಿರಡಿಸಾಯಿ ಸೇವಾ ಸಂಘ: `ಸಂತ ಕನಕದಾಸ~ ನಾಟಕ ಪ್ರದರ್ಶನ. ನಿರ್ದೇಶನ: ಎಸ್. ರಾಜಗೋಪಾಲ್. ವ್ಯವಸ್ಥಾಪಕರು: ಕೆ.ಬಿ.ಸೋಮೇಶ್. ಸಂಗೀತ: ಬಿ.ಇ.ಕಮಲ್ ಕುಮಾರ್. ಸ್ಥಳ: ಎ.ವಿ.ವರದಾಚಾರ್ ಮೆಮೊರಿಯಲ್ ಹಾಲ್, ನಟರಾಜ ಟಾಕೀಸ್ ಹಿಂಭಾಗ, ಶೇಷಾದ್ರಿಪುರಂ. ಚಲನಚಿತ್ರೋತ್ಸವ
ಬೆಂಗಳೂರು ಇಂಟರ್‌ನ್ಯಾಶನಲ್ ಸೆಂಟರ್: ಮೆಕ್ಸಿಕನ್ ಚಲನಚಿತ್ರೋತ್ಸವದಲ್ಲಿ `ಯೂಸ್ಡ್ ಪಾರ್ಟ್ಸ್~ ಚಿತ್ರ ಪ್ರದರ್ಶನ. ಸ್ಥಳ: ಟಿಇಆರ್‌ಐ ಕಾಂಪ್ಲೆಕ್ಸ್, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ದೊಮ್ಮಲೂರು 2ನೇ ಹಂತ. ಸಂಜೆ 6.

ಸುದರ್ಶನ ಗಾಯನ

ಶ್ರೀರಾಮ ಲಲಿತ ಕಲಾ ಮಂದಿರ: ಅಡೂರು ಸುದರ್ಶನ್ ಅವರಿಂದ ಗಾಯನ. ಮೈಸೂರು ವಿ.ಶ್ರೀಕಾಂತ್ (ವಯಲಿನ್), ಎಂ.ಟಿ.ರಾಜಕೇಸರಿ (ಮೃದಂಗ), ಜಿ.ಗುರುಪ್ರಸನ್ನ (ಖಂಜಿರ). ಸ್ಥಳ:  9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ.

ಸಂಗೀತ ನೃತ್ಯ
ಪದ್ಮಾವತಿ ಕಲಾನಿಕೇತನ ಸಂಗೀತ ನೃತ್ಯ ಕಲಾ ಶಾಲೆ: 31ನೇ ವರ್ಷದ ನೃತ್ಯೋತ್ಸವ. ಗುರು ಪದ್ಮಪ್ರಿಯಾ, ಅನುಪಮಾ ವರ್ಮಾ, ಪ್ರತ್ಯುಶಾ ಹಾಗೂ ಕಲಾ ಶಾಲೆ ವಿದ್ಯಾರ್ಥಿಗಳಿಂದ ಭರತನಾಟ್ಯ.  ಸಂತ ಅಣ್ಣಮಾಚಾರ್ಯ ಕೃತಿಗಳಿಗೆ ನೃತ್ಯಾರ್ಪಣೆ. ಅತಿಥಿ: ರಾಮಚಂದ್ರಗೌಡ, ಬಸವರಾಜ. ಅಧ್ಯಕ್ಷತೆ: ರಾಧಾಕೃಷ್ಣರಾಜು. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.

ಧಾರ್ಮಿಕ ಕಾರ್ಯಕ್ರಮ
ಶ್ರೀ ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ ಟ್ರಸ್ಟ್: ಓಂ ನಿಲಯ, ವಿವೇಕಾನಂದ ಮಾರ್ಗ, ಗೋಕುಲ ಬಡಾವಣೆ, ದೇವಸಂದ್ರ, ಕೆ.ಆರ್.ಪುರ, ಭಗವನ್ನಾಮ ಸಂಕೀರ್ತನೆ, ನಿರ್ವಹಣೆ: ಸ್ವಾಮಿ ಚಂದ್ರೇಶಾನಂದಜಿ. ಸಂಜೆ 5.30.

ಸಾಯಿ ಗೀತಾಂಜಲಿ: ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರ, 21ನೇ ಮುಖ್ಯ ರಸ್ತೆ, ಜೆ.ಪಿ.ನಗರ 2ನೇ ಹಂತ, ಭಜನೆ, ಸಂಜೆ 6.

ಶ್ರೀ ಶಂಕರ ಜಯಂತಿ ಮಂಡಲಿ: ಶಂಕರ ಕೃಪಾ, ನಂ45, ಶ್ರೀ ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇಬ್ಲಾಕ್, ಜಯನಗರ. ಸುಬ್ರಾಯ ಶರ್ಮಾ ಅವರಿಂದ ನೈಷ್ಕರ್ಮ್ಯ ಸಿದ್ಧಿ ಕುರಿತು ಪ್ರವಚನ. ಸಂಜೆ 6.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT