ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು - ಜನವರಿ 6 ಶುಕ್ರವಾರ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಪ್ರಕಾಶ್ ರಿಟೈಲ್ ಪ್ರೈ.ಲಿ: ಎಲ್‌ಎಸ್‌ಎಂ ಟವರ್, ನಾಯಂಡಹಳ್ಳಿ ಮೈಸೂರು ರಸ್ತೆ. ಹರ್ಷ ನೂತನ ಮಳಿಗೆ ಉದ್ಘಾಟನೆ: ಸಂಸತ್ ಸದಸ್ಯ ಡಾ.ಆಸ್ಕರ್ ಫರ್ನಾಂಡಿಸ್. ಅತಿಥಿಗಳು: ಶಾಸಕ ಪ್ರಿಯಕೃಷ್ಣ, ಬಿಬಿಎಂಪಿ ಸದಸ್ಯೆ ಎಚ್.ಎನ್. ರಾಜೇಶ್ವರಿ ಉಮೇಶ್ ಬೆಳಗೋಡ್. ಸಂಜೆ 4.30.

ಅಖಿಲ ಕರ್ನಾಟಕ ಎಂ.ಪಿ.ಪ್ರಕಾಶ್ ಜನಹಿತ ವೇದಿಕೆ: ಸಮ್ಮೇಳನ ಸಭಾಂಗಣ, ಶಾಸಕರ ಭವನ. ಅತಿಥಿಗಳು: ಪಿಜಿಆರ್ ಸಿಂಧ್ಯಾ, ಬಿ.ಸೋಮಶೇಖರ್, ಡಾ.ಎಲ್.ಹನುಮಂತಯ್ಯ. ಸಂಜೆ 5.

ಸಾಹಿತ್ಯ ಸಂಘ: ಸಾಹಿತ್ಯ ಪರಿಷತ್, ಚಾಮರಾಜಪೇಟೆ, ಸಮಾಜಮುಖಿ ಹಿರಿಯ ರಾಜಕಾರಣಿ ಹಾಗೂ ಗಾಂಧಿವಾದಿ ವಿ.ಎಸ್.ಕೃಷ್ಣಯ್ಯರ್ ಅವರ 90ನೇ ಜನ್ಮದಿನಾಚರಣೆ. ಐಐಎಂಬಿ ಉಪನ್ಯಾಸಕ ಪ್ರೊ.ಅಶ್ವಿನ್ ಮಹೇಶ್ ಅವರಿಂದ `ವಿಶ್ವಭೂಪಟದಲ್ಲಿ ಬೆಂಗಳೂರು~ ಕುರಿತು ಉಪನ್ಯಾಸ. ಉದ್ಘಾಟನೆ: ಎಸ್.ಸುರೇಶ್ ಕುಮಾರ್, ಅತಿಥಿಗಳು: ಮಾಜಿ ಸಚಿವರಾದ ಪಿಜಿಆರ್ ಸಿಂಧ್ಯಾ, ಬಸವರಾಜ ಹೊರಟ್ಟಿ, ರಾಮಲಿಂಗ ರೆಡ್ಡಿ, ಡಾ.ಸಿದ್ಧಲಿಂಗಯ್ಯ, ಶಾಸಕರಾದ ಎಂ.ಕೃಷ್ಣಪ್ಪ, ಎಲ್.ಎ.ರವಿಸುಬ್ರಹ್ಮಣ್ಯ. ಬೆಳಿಗ್ಗೆ 10.

ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಫಾರ್ ಸ್ಟಡಿಸ್ ಇನ್ ಸಿಎ: ಗರ್ಲ್ಸ್ ಸ್ಕೂಲ್ ಸ್ಟ್ರೀಟ್. ವಾರ್ಷಿಕೋತ್ಸವ. ಉದ್ಘಾಟನೆ: ಎನ್.ಆರ್.ಪಂಡಿತರಾಧ್ಯ. ಅತಿಥಿ: ಗಾಯಕ ಶಶಿಧರ ಕೋಟೆ. ಬೆಳಿಗ್ಗೆ 9.30.

`ಎಲ್ಸ್‌ವೇರ್~
 ಕಿಂಕಿಣಿ ಆರ್ಟ್ ಗ್ಯಾಲರಿ:`ಎಲ್ಸ್‌ವೇರ್~ ಸಚಿನ್ ಜಲ್ತಾರೆ, ಮನಿಷ್ ಮೊತ್ರಾ, ರಾಮೇಶ್ವರ್ ಸಿಂಗ್, ಸುಜಾತಾ ಅಚ್ರೇಕರ್ ಅವರ ಕಲಾಕೃತಿಗಳ ಪ್ರದರ್ಶನ.  ಸ್ಥಳ: ಕಿಂಕಿಣಿ ಆರ್ಟ್ ಗ್ಯಾಲರಿ,  ಇನ್‌ಫೆಂಟ್ರಿ ರಸ್ತೆ.

ಚಿತ್ರ ಪ್ರದರ್ಶನ
ರಿನೈಸನ್ಸ್ ಗ್ಯಾಲರಿ: `ಕಲರ್ಸ್‌ ಆಫ್ ಎಮೋಷನ್ಸ್~ ಬಹರೈನ್ ಮೂಲದ ಎಲ್ಲಾ ಪ್ರಕಾಶ ಅವರ ಚಿತ್ರಗಳ ಪ್ರದರ್ಶನ.ಸ್ಥಳ: ರಿನೈಸನ್ಸ್ ಗ್ಯಾಲರಿ.

ವಾರ್ಷಿಕೋತ್ಸವ
ವಿಜಯ ವಿಠಲ ಸಂಗೀತ ಶಾಲೆ: 11ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಪ್ರಯುಕ್ತ ಬೆಳಿಗ್ಗೆ 9.30ರಿಂದ ಅಂಗವಿಕಲ ಮಕ್ಕಳಿಗಾಗಿ ವಿವಿಧ ಸ್ಪರ್ಧೆ.  ಉದ್ಘಾಟನೆ: ಕಲ್ಹಾಪುರ ಗುರುರಾಜಾಚಾರ್ಯ ಮತ್ತು ಮಂಜುಳಾ ರವಿಸುಬ್ರಮಣ್ಯ. ಸಂಜೆ 4ರಿಂದ ಸಾಂಸ್ಕೃತಿಕ ಕಾರ್ಯಕ್ರಮ. ರಜನಿ ಪ್ರಮೋದ್ ಅವರಿಂದ ನೃತ್ಯ, ಶಾಲೆಯ ಮಕ್ಕಳಿಂದ ಮೋಹನ ಸಂಜೆ ಕಾರ್ಯಕ್ರಮ.

ಅತಿಥಿಗಳು: ಅನಂತಕುಮಾರ್, ತೇಜಸ್ವಿನಿ ಅನಂತಕುಮಾರ್. ರಾಯಚೂರು ಶೇಷಗಿರಿ ದಾಸ್. ಅಧ್ಯಕ್ಷತೆ: ಎ.ಎನ್. ವಿಜಯ ವಿಠ್ಠಲ. ಸ್ಥಳ: ಮರಡಿ ಸುಬ್ಬಯ್ಯ ಟ್ರಸ್ಟ್ ಕಲ್ಯಾಣ ಮಂಟಪ, ಹನುಮಂತನಗರ.

ಭರತನಾಟ್ಯ
ನೃತ್ಯ ಕಲಾಮಂದಿರಂ: ಗುರು ಬಿ.ಭಾನುಮತಿ ಹಾಗೂ ಶೀಲಾ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಪೂರ್ಣಿಮಾ ನವೀನ್ ಹಾಗೂ ಶ್ರುತಿ ಪಿ.ರವಿ ಅವರಿಂದ ಭರತನಾಟ್ಯ. ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 6.

ಮಂಗಳವಾದ್ಯ
ಲಲಿತಕಲಾ ಪರಿಷತ್:  `ಮಂಗಳವಾದ್ಯದೊಂದಿಗೆ ನೂತನ ವರ್ಷದ ಚೊಚ್ಚಲ ಕಛೇರಿ~ ಎಸ್.ಪಿ. ಪಳನಿವೇಲ್ ಮತ್ತು ಪ್ರಭಾವತಿ ಪಳನಿವೇಲ್ ಅವರಿಂದ ಯುಗಳ ನಾಗಸ್ವರ. ಆರ್ ರಾಜ್‌ಶೇಖರ್ ಮತ್ತು  ಬಿ. ಭಾಸ್ಕರ್ ಅವರಿಂದ ಜೋಡಿ ಡೋಲು.
ಸ್ಥಳ: ಡಾ.ಎಚ್.ಎನ್. ಕಲಾಕ್ಷೇತ್ರ ಜಯನಗರ. ಸಂಜೆ 6.30ಕ್ಕೆ.

ಅಂತರಶಾಲಾ ಸ್ಪರ್ಧೆ
ವಚನ ಜ್ಯೋತಿ ಬಳಗ: ವಚನಾಮೃತವರ್ಷಿಣಿ ಮಹೋತ್ಸವ ಪ್ರಯುಕ್ತ ಬೆಳಿಗ್ಗೆ 9ರಿಂದ ವಚನ ಗಾಯನ, ವಚನ ಪ್ರಬಂಧ, ವಚನ ವಿವೇಚನ, ವಚನ ಚಿತ್ರ, ವಚನ ವೇಷಭೂಷಣ ಮತ್ತು ವಚನ ರಸಪ್ರಶ್ನೆಗಳ ಅಂತರಶಾಲಾ ಸ್ಪರ್ಧೆಗಳು. ಉದ್ಘಾಟನೆ: ಅರವಿಂದ ಜತ್ತಿ. ಸಂಜೆ 6ಕ್ಕೆವಚನ ಸಂಗೀತ ಸಂಭ್ರಮದಲ್ಲಿ ಗೋಪಾಲ್ ವಾಜಪೇಯಿ, ಅನೂಪ್ ಸೀಳಿನ್ ಅವರಿಗೆ ಸನ್ಮಾನ. ಅತಿಥಿಗಳು: ರಾಮಚಂದ್ರ ಗೌಡ, ಡಿ.ಎಸ್.ವೀರಯ್ಯ. ಸ್ಥಳ: ಗ್ರಂಥಾಂಗಣ, ನಗರ ಕೇಂದ್ರ ಗ್ರಂಥಾಲಯ ಸಭಾಂಗಣ, ಹಂಪಿನಗರ, ವಿಜಯನಗರ 2ನೇ ಹಂತ. ಬೆಳಿಗ್ಗೆ 9ರಿಂದ. ಮಾಹಿತಿಗೆ: 98451 84267

ವಿಚಾರ ಸಂಕಿರಣ
ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ: ` ಸ್ಕಂದ-ಗೋತ್ರ ಪುರುಷ~ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ:  ಉದ್ಘಾಟನೆ: ಸಚಿವ ಗೋವಿಂದ ಕಾರಜೋಳ. ಮುಖ್ಯ ಅತಿಥಿ: ಎಂ. ಚಿದಾನಂದಮೂರ್ತಿ. ಅಧ್ಯಕ್ಷತೆ: ಬಿ.ಎಸ್ ಯಡಿಯೂರಪ್ಪ. ಸಾನಿಧ್ಯ: ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ಮತ್ತು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ. ಸ್ಥಳ: ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ಶತಮಾನೋತ್ಸವ ಸಭಾಂಗಣ, ಸಿಟಿ ರೈಲ್ವೆ ಸ್ಟೇಷನ್ ಪಕ್ಕ. ಬೆಳಿಗ್ಗೆ 9.30ಕ್ಕೆ.

 ಶಾಸ್ತ್ರೀಯ ನೃತ್ಯ

ಪ್ರತಿ ಶುಕ್ರವಾರದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ: ಮಲೇಷ್ಯಾ ತಂಡದ 10 ಜನರಿಂದ  ಶಾಸ್ತ್ರೀಯ ನೃತ್ಯ, ಸಂಚಾಲಕರು: ವಿ.ಆರ್.ಸಿ. ಸಂಗೀತ ಮತ್ತು ನೃತ್ಯ ಅಕಾಡೆಮಿ.ಸ್ಥಳ: ಯವನಿಕಾ, ನೃಪತುಂಗಾ ರಸ್ತೆ. ಸಂಜೆ 6.30ಕ್ಕೆ.

ರಂಗಭೂಮಿ ಉತ್ಸವ
ಜೈನ್ ವಿಶ್ವವಿದ್ಯಾಲಯ: ಸಿಎಂಎಸ್ ಉತ್ಸವದಲ್ಲಿ ಅಭಿನಯ-ರಾಷ್ಟ್ರೀಯ ರಂಗಭೂಮಿ ಉತ್ಸವ. ಕನ್ನಡ ಮತ್ತು ಹಿಂದಿ ಸಣ್ಣ ನಾಟಕಗಳ ಸ್ಪರ್ಧೆಯನ್ನೊಳಗೊಂಡು ರಾಷ್ಟ್ರೀಯ ರಂಗಭೂಮಿ ಉತ್ಸವದ ಅಂತಿಮ ಹಂತ. ಸ್ಥಳ: ಜೆಎಸ್‌ಎಸ್ ಕಾಲೇಜು ಸಭಾಂಗಣ. 8ನೇ ಬ್ಲಾಕ್, ಜಯನಗರ.

ನೃತ್ಯ ಗಾಯನ
ಸಂಗೀತ ಸಂಭ್ರಮ: `ನಿರಂತರಂ~ ಸಂಗೀತ ಹಾಗೂ ನೃತ್ಯೋತ್ಸವದಲ್ಲಿ ತ್ರಿಚೂರ್ ಸಹೋದರರಾದ ಕೃಷ್ಣ ಮೋಹನ್ ಹಾಗೂ ರಾಮ್‌ಕುಮಾರ್ ಮೋಹನ್ ಅವರಿಂದ ಗಾಯನ. ಸಿ.ಎನ್. ಚಂದ್ರಶೇಖರ್ (ವಯಲಿನ್), ಆರ್. ಮೋಹನ್ (ಮೃದಂಗ), ಎಸ್. ವಿ.ಬಾಲಕೃಷ್ಣ (ಮೋರ್ಚಿಂಗ್). ಸುಪರ್ಣ ವೆಂಕಟೇಶ್ ಅವರಿಂದ `ಮಹಾಶಕ್ತಿ~ ನೃತ್ಯ ರೂಪಕ.  ಅತಿಥಿ: ಡಾ.ಸುಮಾ ಸುಧೀಂದ್ರ, ಆರ್.ಕೆ.ಉಷಾ. ಸ್ಥಳ: ಸೇವಾ ಸದನ, 14ನೇ ಮುಖ್ಯರಸ್ತೆ, ಎಂಎಲ್‌ಎ ಕಾಲೇಜು ಎದುರು, ಮಲ್ಲೇಶ್ವರಂ. ಸಂಜೆ 6.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT