ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಫೆಬ್ರುವರಿ 6, ಭಾನುವಾರ

Last Updated 5 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ರೈಲ್ವೆ ಇಲಾಖೆ: ವೈಟ್‌ಫೀಲ್ಡ್. ಮಾದರಿ ರೈಲ್ವೆ ನಿಲ್ದಾಣ ಉದ್ಘಾಟನೆ- ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ. ಅತಿಥಿಗಳು- ಸಂಸದ ಪಿ.ಸಿ.ಮೋಹನ್, ಮೇಯರ್ ನಟರಾಜ್, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಎಂ.ನಾಗರಾಜ್. ಅಧ್ಯಕ್ಷತೆ- ಶಾಸಕ ಅರವಿಂದ ಲಿಂಬಾವಳಿ. ಮಧ್ಯಾಹ್ನ 12.

ಸೌಖ್ಯ ಇಂಟರ್‌ನ್ಯಾಷನಲ್ ಚಾರಿಟಬಲ್ ಟ್ರಸ್ಟ್: ಸೌಖ್ಯರಸ್ತೆ, ಸಾಮೇತನಹಳ್ಳಿ, ವೈಟ್‌ಫೀಲ್ಡ್. ಗ್ರಾಮೀಣ ಆರೋಗ್ಯ ಕೇಂದ್ರದ ಶಿಲಾನ್ಯಾಸ- ರಾಜ್ಯಪಾಲ ಎಚ್.ಆರ್. ಭಾರದ್ವಾಜ್. ಅತಿಥಿ  ಸಚಿವ ಬಿ.ಎನ್. ಬಚ್ಚೇಗೌಡ. ಸಂಜೆ 5.

ಸಹನಶ್ರೀ ಎಂಟರ್‌ಪ್ರೈಸಸ್: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರ ನಿವಾಸ, ಕುಮಾರಪಾರ್ಕ್. ‘ಭಕ್ತಿ ಭಾವ ಸೌರಭ’ ಧ್ವನಿಸುರಳಿ ಬಿಡುಗಡೆ- ಸಿದ್ಧರಾಮಯ್ಯ. ಅತಿಥಿಗಳು- ವಿಧಾನ ಪರಿಷತ್ತಿನ ಸದಸ್ಯ ಡಾ.ದೊಡ್ಡರಂಗೇಗೌಡ, ಸಂಗೀತಾ ಬಿ.ಬಲರಾಂ, ಮಾಜಿ ಸಚಿವ ಎಚ್.ಎಂ. ರೇವಣ್ಣ, ರಾಜ್ಯ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ. ಬೆಳಿಗ್ಗೆ 10.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಗೀತ ಸಾಮ್ರಾಟ ಪಂಡಿತ್ ಭೀಮಸೇನ ಜೋಷಿ ಅವರಿಗೆ ಶ್ರದ್ಧಾಂಜಲಿ. ಉದ್ಘಾಟನೆ- ಸಚಿವ ಗೋವಿಂದ ಎಂ.ಕಾರಜೋಳ. ಅತಿಥಿಗಳು- ವಾರ್ತಾ ಇಲಾಖೆಯ ನಿರ್ದೇಶಕ ಡಾ. ಮುದ್ದುಮೋಹನ, ಲೇಖಕ ಮನು ಚಕ್ರವರ್ತಿ. ಗಾನ ನಮನ- ಪಂಡಿತ್ ಮಾಧವ ಗುಡಿ, ಪಂಡಿತ್ ಅನಂತ್ ತೇರದಾಳ್. ಅಧ್ಯಕ್ಷತೆ- ಸಂಗೀತ ವಿಮರ್ಶಕ ಪ್ರೊ. ಮೈಸೂರು ವಿ.ಸುಬ್ರಹ್ಮಣ್ಯ. ಸಂಜೆ 4.

ಆಯುರ್ವೇದಿಕ್ ವಿಜ್ಞಾನ ಮತ್ತು ಸಂಶೋಧನಾ ಕಾಲೇಜು: ಕನಕಪುರ ರಸ್ತೆ, ನೂತನ ಕಾಲೇಜಿನ ಉದ್ಘಾಟನಾ ಸಮಾರಂಭ. ಸಾನಿಧ್ಯ- ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ. ಅತಿಥಿಗಳು- ಸಚಿವರಾದ ಶೋಭಾ ಕರಂದ್ಲಾಜೆ, ಎಸ್.ಎ.ರಾಮದಾಸ್. ಸಂಜೆ 4.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ: ಡಾ.ರಾಜ್‌ಕುಮಾರ್ ಕಲಾಕ್ಷೇತ್ರ, ಆರ್‌ಟಿಓ ಸಂಕೀರ್ಣ, ರಾಜಾಜಿನಗರ. ತುಳು ಸಮ್ಮೇಳನ. ಉದ್ಘಾಟನೆ- ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ. ಅತಿಥಿಗಳು- ಅಕಾಡೆಮಿಯ ರಿಜಿಸ್ಟ್ರಾರ್ ಬಿ. ಚಂದ್ರಹಾಸ ರೈ, ಸದಸ್ಯ ಉದಯ ಧರ್ಮಸ್ಥಳ, ಉದ್ಯಮಿ ಡಿ.ಕೆ.ಚೌಟ, ಸಂಗೀತ ನಿರ್ದೇಶಕ ವಿ. ಮನೋಹರ, ಶಾಸಕ ನೆ.ಲ.ನರೇಂದ್ರಬಾಬು. ಉಪನ್ಯಾಸಕರು- ಪತ್ರಕರ್ತ ಬಾಲಕೃಷ್ಣ ಪುತ್ತಿಗೆ, ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಎಂ.ಕೆ. ಸೀತಾರಾಮ ಕುಲಾಲ್, ಭಾಸ್ಕರ ರೈ ಕುಕ್ಕುವಳ್ಳಿ, ಎಸ್.ಆರ್.ಹೆಗ್ಡೆ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಬಿ. ಪ್ರಭಾಕರ ಶೆಟ್ಟಿ. ಡಾ. ಕೊಯಿರಾ ಬಾಳೆಪುಣಿ. ಬೆಳಿಗ್ಗೆ 10.

ವೆಂಕಟೇಶ ನಾಟ್ಯ ಮಂದಿರ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ. ಭರತನಾಟ್ಯ ಪ್ರದರ್ಶನ. ಅತಿಥಿ- ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ, ಜೈನ ಸಮೂಹ ಶಿಕ್ಷಣ ಸಂಸ್ಥೆಯ ಪ್ರೊ. ಕೆ.ಎಸ್.ಶಾಂತಮಣಿ. ಬೆಳಿಗ್ಗೆ 10.30.

ದಿ ಆರ್ಟ್ ಆಫ್ ಲಿವಿಂಗ್: ಕನಕಪುರ ರಸ್ತೆ. ಯುವ ಜಾಗೃತಿ ಸಮ್ಮೇಳನ. ಸಾನಿಧ್ಯ- ಶ್ರೀ ಶ್ರೀ ರವಿಶಂಕರ ಗುರೂಜಿ. ಬೆಳಿಗ್ಗೆ 10.30.

ಯುವ ಸೇವಾ ಕೇಂದ್ರ: ಜ್ಞಾನಗಿರಿ, ನಂ. 75/76, 4ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಸೌಧಾಮಿನಿ ಬಡಾವಣೆ. ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ. ಭಾಷಣ- ಸ್ವಾಮಿ ವಿವೇಕಾನಂದ ಯುವ ಚಳವಳಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್. ಬಾಲಸುಬ್ರಮಣಿಯಂ. ಬೆಳಿಗ್ಗೆ 9.30.

ಬಸವ ಬಳಗ: ಕಾವೇರಿ ಶಾಲಾ ಆವರಣ, ಸಹಕಾರನಗರ. ತಿಂಗಳ ತಿಳಿವು ಕಾರ್ಯಕ್ರಮದಲ್ಲಿ ’ಆಯುರ್ವೇದಿಂದ ಆರೋಗ್ಯಕರ ಜೀವನ ಶೈಲಿ’ ಕುರಿತು ಉಪನ್ಯಾಸ- ಡಾ. ವಸುಂಧರಾ ಭೂಪತಿ. ಅಧ್ಯಕ್ಷತೆ- ಬಳಗದ ಅಧ್ಯಕ್ಷ ಡಾ.ಕೆ.ಪಿ.ಗುರುಸ್ವಾಮಿ ಸಂಜೆ 6.

ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕ: ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಸಭಾಂಗಣ, ಯಲಹಂಕ ಉಪನಗರ. ವಾರ್ಷಿಕೋತ್ಸವ ಸಮಾರಂಭ. ಉದ್ಘಾಟನೆ- ಉದ್ಯಮಿ ಗೋವಿಂದೂರು ವೆಂಕಪ್ಪ ಹೆಗ್ಡೆ. ಅತಿಥಿ- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಉದಯ ಧರ್ಮಸ್ಥಳ. ಸದಸ್ಯರು ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು. ಉಡುಪಿ ಜಿಲ್ಲೆಯ ಸಂಗಮ ಜಾನಪದ ಕಲಾಮೇಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಂಪ್ರದಾಯ ಕುಣಿತಗಳ ಪ್ರದರ್ಶನ. ಬೆಳಿಗ್ಗೆ 10.

ಗಾಂಗೇಯ ಸಾಹಿತ್ಯಾಸ್ತಕರ ವೇದಿಕೆ: ವಲ್ಲಭನಿಕೇತನ, ಕುಮಾರ ಉದ್ಯಾನ ಪೂರ್ವ. ಕವಿಗೋಷ್ಠಿ- ಬೆಳಿಗ್ಗೆ 10.30.

ಕಮಲಾ ಗೋಯೆಂಕಾ ಪ್ರತಿಷ್ಠಾನ: ವೀರೇಂದ್ರ ಪಾಟೀಲ ಪದವಿ ಕಾಲೇಜು, 11ನೇ ಮುಖ್ಯರಸ್ತೆ, ಸದಾಶಿವನಗರ. ಉಚಿತ ಕನ್ನಡ ತರಗತಿಗಳ ಸಮಾರೋಪ ಸಮಾರಂಭ. ಅತಿಥಿಗಳು- ಕಾಲೇಜು ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಕೆ.ವಿ. ಕೋದಂಡರಾಮಯ್ಯ. ಬೆಳಿಗ್ಗೆ 9.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್:  ಬಿ.ಪಿ.ವಾಡಿಯಾ ರಸ್ತೆ. ಹಿಂದುಸ್ತಾನಿ ಸಂಗೀತ- ಕಾಸರವಳ್ಳಿ ಸಹೋದರಿಯರಾದ ರೂಪಾ ಮತ್ತು ದೀಪಾ. ಸಂಜೆ 6.

ಸತ್ಯ ತೀರ್ಥ ಸಂಸ್ಥೆ: ಗಣಪತಿ ಸಚ್ಚಿದಾನಂದ ಆಶ್ರಮ, ಗಿರಿನಗರ. ಪೂರ್ಣಪ್ರಮತಿ ದಿನಾಚರಣೆ. ಉದ್ಘಾಟನೆ- ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ್ ವರ್ಕೇಡಿ, ಸಾನಿಧ್ಯ-ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ. ಅತಿಥಿಗಳು- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್, ಐಐಎಚ್‌ಟಿ ಸಂಸ್ಥೆಯ ಮುಖ್ಯಸ್ಥ ಪ್ರೊ. ನವಜೊತ್ ಸಿಂಗ್. ಶತಾವಧಾನಿ ಡಾ.ಆರ್. ಗಣೇಶ್. ಸ್ಮಾರ್ಟ್ ಸಂಸ್ಥೆಯ ಶ್ಯಾಂ ಸುಂದರ್ ಶರ್ಮ. ಗಾಯಕಿ ಸಂಗೀತ ಕಟ್ಟಿ. ನಟ ಸುನೀಲ್ ಪುರಾಣಿಕ್. ಅಧ್ಯಕ್ಷತೆ- ಪ್ರಹ್ಲಾದ್ ಆಚಾರ್ಯ. ಸಂಜೆ 4.30.

ನಂದಿನಿ ಮಕ್ಕಳ ರಂಗ ಕೇಂದ್ರ: ನಂ. 42/1, ’ಸುಮ್ಮನೆ’, ಎಸ್‌ಜಿ ಇಂಟರ್‌ನ್ಯಾಷನಲ್ ಶಾಲೆ ರಸ್ತೆ, ನಂದಿನಿ ಬಡಾವಣೆ. ರಂಗ ಶಾಲೆಯ ಉದ್ಘಾಟನೆ- ಯಕ್ಷಗಾನ ಭಾಗವತ ಮಂಜುನಾಥ್ ಭಟ್. ಅತಿಥಿಗಳು- ಚಿತ್ರನಟ ಕರಿಬಸವಯ್ಯ, ರಂಗವಿಮರ್ಶಕ ಡಾ.ಎ.ಆರ್.ಗೋವಿಂದಸ್ವಾಮಿ, ಆರ್.ಸಿದ್ಧಲಿಂಗಮೂರ್ತಿ. ಬೆಳಿಗ್ಗೆ 10.

ಧಾರ್ಮಿಕ ಕಾರ್ಯಕ್ರಮ
ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್:
ಮಹಾಲಕ್ಷ್ಮೀಪುರ. ಭಜನೆ -ಶೃತಿ ವಾಹಿನಿ ತಂಡ. ಬೆಳಿಗ್ಗೆ 9.

ಶ್ರೀರಾಂಪುರ ವಿಪ್ರವೃಂದ ಸಭಾ: ಪವನ ಇಂಗ್ಲಿಷ್ ಶಾಲೆ, ನಾಗಪ್ಪ ಬ್ಲಾಕ್, ಶ್ರೀರಾಂಪುರ. ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ. ಬೆಳಿಗ್ಗೆ 11.30.

ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ:  ನಾಗರಬಾವಿ 2ನೇ ಹಂತ. ಕನಕದಾಸ ದೇವರನಾಮಗಳ ಗೋಷ್ಠಿ ಗಾಯನ- ಎಸ್. ಅನಿರುದ್ದ ಮತ್ತು ತಂಡ. ಸಂಜೆ 6.

ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ: ವಿಭೂತಿಪುರ, ಮಾರತ್‌ಹಳ್ಳಿ. ಧರ್ಮ ಚಿಂತನ ಕಾರ್ಯಕ್ರಮ. ’ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’  ಉಪನ್ಯಾಸ- ಶೇಷಾದ್ರಿಪುರ ಕಾಲೇಜಿನ ಉಪನ್ಯಾಸಕ ಎಸ್. ರಾಮಲಿಂಗೇಶ್ವರ. ಅಧ್ಯಕ್ಷತೆ- ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ. ಬೆಳಿಗ್ಗೆ11.

ನೃಪತುಂಗನಗರ ವಿನಾಯ ಸೇವಾ ಟ್ರಸ್ಟ್: ನೃಪತುಂಗನಗರ, ನಾಗರಬಾವಿ. ಕುಂಭಾಭಿಷೇಕ. ಬೆಳಿಗ್ಗೆ 11.

ಚೌಡೇಶ್ವರಿ ಚಾರಿಟಬಲ್ ಹಾಗೂ ಟೆಂಪಲ್ ಟ್ರಸ್ಟ್: ಎಚ್‌ಎಂಟಿ ಬಡಾವಣೆ, ಮತ್ತಿಕೆರೆ. ಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸವ . ಬೆಳಿಗ್ಗೆ 10.30.

ಸದ್ಗುರು ಸಂಗೀತ ಅಕಾಡೆಮಿ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ದಾಸ ನಿರಂತರ ಸಂಗೀತೋತ್ಸವ. ಸಾನಿಧ್ಯ- ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಸಂತ ಭದ್ರಗಿರಿ ಅಚ್ಯುತದಾಸ, ಪ್ರಹ್ಲಾದ ಗುರೂಜಿ. ಅತಿಥಿಗಳು- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊ.ರು.ಚನ್ನಬಸಪ್ಪ. ಭಾಗವಹಿಸಲಿರುವ ಗಾಯಕರು- ರಾಘವೇಂದ್ರ ಗುಡಿ, ಸ್ನೇಹಾ ಹಂಪಿಹೊಳಿ, ರವೀಂದ್ರ ಸೊರಂಗಾವಿ, ಶಶಿಧರ ಕೋಟೆ, ಮುಕುಂದ ಹಾವೇರಿ, ಸೀಮಾ ರಾಯ್ಕರ, ಲತಾ ರಾಜೇಶ, ದೀಪ್ತಿ, ಪ್ರಸನ್ನ, ಶ್ವೇತಾ ಪುರೋಹಿತ, ಶರಣ್ಯ ಶರವೂರು, ಎಸ್. ತೇಜಶ್ರೀ. ಬೆಳಿಗ್ಗೆ 9.30.

ಸತ್ಯ ಸಾಯಿ ಸೇವಾಕ್ಷೇತ್ರ: ನಂ. 36, 21ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಜೆ.ಪಿ.ನಗರ. ಲಕ್ಷ ಅರ್ಚನೆ. ಬೆಳಿಗ್ಗೆ 10.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT