ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು -ಸೆಪ್ಟೆಂಬರ್ 14, ಬುಧವಾರ

Last Updated 13 ಸೆಪ್ಟೆಂಬರ್ 2011, 19:25 IST
ಅಕ್ಷರ ಗಾತ್ರ

ಅರಣ್ಯ ಇಲಾಖೆ: ತುರಹಳ್ಳಿ ಕಿರು ಅರಣ್ಯ ಪ್ರದೇಶ, ಕಗ್ಗಲೀಪುರ ವಲಯ. ನಗರ ವನ ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಸಂಜೆ 4.

ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (ನಿಯಾಸ್): ಎಂ.ಎಸ್. ರಾಮಯ್ಯ ಕಾಲೇಜು ಸಮೀಪ. ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಪ್ರಯುಕ್ತ ಸಮಾವೇಶ. ಉದ್ಘಾಟನೆ- ಸಚಿವ ರೇವುನಾಯಕ್ ಬೆಳಮಗಿ. ಬೆಳಿಗ್ಗೆ 11.

ಭಾರತ ಯಾತ್ರಾ ಕೇಂದ್ರ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ರಾಮಕೃಷ್ಣ ಹೆಗಡೆ ಪ್ರಶಸ್ತಿ ಪ್ರದಾನ ಸಮಾರಂಭ. ಪುರಸ್ಕೃತರು- ವಿಧಾನ ಪರಿಷತ್ ಸದಸ್ಯ ಎಂ.ಸಿ.ನಾಣಯ್ಯ. ಅತಿಥಿಗಳು- ಸಚಿವ ಗೋವಿಂದ ಎಂ.ಕಾರಜೋಳ, ಮಾಜಿ ಸಚಿವ ಬಿ.ಎಲ್.ಶಂಕರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ.ದತ್ತ, ಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಂ. ಬೆಳಿಗ್ಗೆ 11.30.

ಪುರಭವನ: ಜೆ.ಸಿ.ರಸ್ತೆ. ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರ ಜನ್ಮ ದಿನಾಚರಣೆ. ಅತಿಥಿಗಳು- ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ರಾಮಚಂದ್ರಗೌಡ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಪ್ರಭುದೇವ್, ಚಿತ್ರ ಸಾಹಿತಿ ಸಿ.ವಿ.ಶಿವಶಂಕರ್. ಬೆಳಿಗ್ಗೆ 11.

ಕುಶಲಕಲಾವೃಂದ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಕೆ.ಹಿರಣ್ಣಯ್ಯ ವಿರಚಿತ `ರಾಷ್ಟ್ರವೀರ ಎಚ್ಚಮನಾಯಕ~ ನಾಟಕ ಪ್ರದರ್ಶನ. ಉದ್ಘಾಟನೆ- ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ. ಅತಿಥಿಗಳು- ಮಾಜಿ ಮೇಯರ್ ಕೆ.ಲಕ್ಕಣ್ಣ, ನಟ ಜಗನ್ನಾಥ್. ಬೆಳಿಗ್ಗೆ 10.
ದಿ ಬೆಂಗಳೂರು ವಿಜ್ಞಾನ ವೇದಿಕೆ: ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ಬಸವನಗುಡಿ. ವಿಜ್ಞಾನ ವಿಷಯಗಳ ಕುರಿತು ಚಲನಚಿತ್ರ ಪ್ರದರ್ಶನ. ಸಂಜೆ 6.

ರಂಗಪ್ರಪಂಚ ಸಾಂಸ್ಕೃತಿಕ ವೇದಿಕೆ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ರಂಗಪ್ರಪಂಚ ಪ್ರಶಸ್ತಿ ಪ್ರದಾನ ಸಮಾರಂಭ. ಉದ್ಘಾಟನೆ- ಚಿತ್ರನಟ ಗುರುದತ್, ವೇದಿಕೆ ಅಧ್ಯಕ್ಷ ಸಿ.ವಿ.ಶ್ರೀನಿವಾಸಯ್ಯ, ಉಭಯಗಾನ ವಿದುಷಿ ಡಾ.ಶ್ಯಾಮಲಾ ಜಿ.ಭಾವೆ, ರಂಗತಜ್ಞ ಗೋಪಾಲಕೃಷ್ಣ ನಾಯರಿ. ಸಂಜೆ 4.30.
ದಯಾನಂದ ಸಾಗರ್ ಕಾಲೇಜು: ಕುಮಾರಸ್ವಾಮಿ ಬಡಾವಣೆ. ಅಂತರ ಕಾಲೇಜು ನಾಟಕ ಮತ್ತು ಸಾಂಸ್ಕೃತಿಕ ಸ್ಪರ್ಧೆ. ಅತಿಥಿ- ರಂಗಕರ್ಮಿ ಸುರೇಶ್ ಆನಗಳ್ಳಿ. ಬೆಳಿಗ್ಗೆ 10.

ನ್ಯಾಷನಲ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ: ಬಸವನಗುಡಿ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ. ಅತಿಥಿಗಳು- ಉದ್ಯಮಿ ಡಾ. ಪಿ.ಸದಾನಂದ ಮಯ್ಯ, ಪ್ರೊ.ಎಸ್.ಎನ್. ನಾಗರಾಜರೆಡ್ಡಿ. ಬೆಳಿಗ್ಗೆ 10.

ಭಾರತೀಯ ಸಂಸ್ಕೃತಿ ವಿದ್ಯಾಪೀಠ: ವಿಜಯನಗರ. ಅಂತರ ಪ್ರೌಢಶಾಲಾ ಭಾವಗೀತೆ ಮತ್ತು ಶಾಸ್ತ್ರೀಯ ಸಂಗೀತ ಬಹುಮಾನ ವಿತರಣಾ ಸಮಾರಂಭ. ಅತಿಥಿ- ಗಾಯಕ ಉಪಾಸನಾ ಮೋಹನ್. ಅಧ್ಯಕ್ಷತೆ- ವಿದ್ಯಾಪೀಠದ ಸ್ಥಾಪಕಾಧ್ಯಕ್ಷ ಕೆ.ಎನ್.ಪುಟ್ಟಮ್ಮ ಹತ್ವಾರ್. ಮಧ್ಯಾಹ್ನ 3.

ಧಾರ್ಮಿಕ ಕಾರ್ಯಕ್ರಮ
ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ
: ವೀರಾಂಜನೇಯಸ್ವಾಮಿ ದೇವಸ್ಥಾನ, ನಾರಾಯಣಪ್ಪ ಉದ್ಯಾನ, ವೈಟ್‌ಫೀಲ್ಡ್. ಸ್ವಾಮಿ ಚಂದ್ರೇಶಾನಂದಜೀ ಅವರಿಂದ ಶ್ರೀಮದ್ ರಾಮಾಯಣ ಕಥಾಮೃತ ಕುರಿತು ಪ್ರವಚನ. ಸಂಜೆ 6.

ಚಿನ್ಮಯ ಮಿಷನ್: 9ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ. ಮಲ್ಲೇಶ್ವರ. ವಸುಮನ ಚೈತನ್ಯ ಅವರಿಂದ ಪ್ರವಚನ. ಸಂಜೆ 6.30.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ಅನಂತ ಶರ್ಮ ಭುವನ ಅವರಿಂದ ಪ್ರವಚನ. ಸಂಜೆ 6.30.

ವಿಜಯನಗರ ಮಧ್ವ ಸೇವಾ ಟ್ರಸ್ಟ್: ಗಂಗಾಧರ ಬಡಾವಣೆ, 2ನೇ ಮುಖ್ಯರಸ್ತೆ, ವಿಜಯನಗರ. ಜಯತೀರ್ಥಾಚಾರ್ಯ ಮಳಗಿ ಅವರಿಂದ `ಭೀಷ್ಮ ಪರ್ವ-ದ್ರೋಣಪರ್ವ~ ಕುರಿತು ಪ್ರವಚನ. ಸಂಜೆ 6.30.

ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠ: ರಾಜೀವ್‌ಗಾಂಧಿ ವೃತ್ತ, ಶೇಷಾದ್ರಿಪುರ. ಅಕ್ಕಿ ರಾಘವೇಂದ್ರಾಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ ಕುರಿತು ಪ್ರವಚನ. ಸಂಜೆ 6.30.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ. ಶತಾವಧಾನಿ ಆರ್.ಗಣೇಶ್ ಅವರಿಂದ `ಕಾಳಿದಾಸನ ರಘುವಂಶ~ ಕುರಿತು ಪ್ರವಚನ. ಸಂಜೆ 6.30.

ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ: ಅರಮನೆ ನಗರ. ಕಡುಬು ಅಲಂಕಾರ. ಬೆಳಿಗ್ಗೆ 7.30.

ಕೋದಂಡರಾಮ ದೇವಸ್ಥಾನ ಸಮಿತಿ: ರಾಮಮಂದಿರ ರಸ್ತೆ, ಸಂಪಂಗಿರಾಮನಗರ. ಸೇವಂತಿ ಹೂ ಅಲಂಕಾರ. ಬೆಳಿಗ್ಗೆ 7.

ಶ್ರೀಮದಾನಂದತೀರ್ಥ ಪ್ರವಚನ ಸಮಿತಿ: ರಾಘವೇಂದ್ರಸ್ವಾಮಿ ಮಠ, 6ನೇ ಅಡ್ಡರಸ್ತೆ,
ಅಮರಜ್ಯೋತಿನಗರ. ಖೇಡಾ ಕೃಷ್ಣಾಚಾರ್ಯ ಅವರಿಂದ ಗರುಡ ಪುರಾಣ ಕುರಿತು ಪ್ರವಚನ. ಸಂಜೆ 7.

ರಾಗಿಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಜಯನಗರ. ಕುಮಾರವ್ಯಾಸ ಭಾರತದಲ್ಲಿ ವಿರಾಟ ಪರ್ವ ಕುರಿತು ಉಪನ್ಯಾಸ. ಸಂಜೆ 6.30.

ವೇದಾಂತ ಸತ್ಸಂಗ ಕೇಂದ್ರ: ಸಾಕಮ್ಮ ಗಾರ್ಡನ್, ಬಸವನಗುಡಿ. ಛಾಂದೋಗ್ಯೋಪನಿಷತ್ ಕುರಿತು ಪ್ರವಚನ. ಬೆಳಿಗ್ಗೆ 9.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT