ಶುಕ್ರವಾರ ರಜನೀಕಾಂತ್ ನಗರಕ್ಕೆ ಭೇಟಿ ಕೊಟ್ಟರು. `ಪ್ರಸಾದ್~ ಕನ್ನಡ ಚಿತ್ರ ನಿರ್ಮಿಸಿರುವ ಅಶೋಕ್ ಖೇಣಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
`ಪ್ರಸಾದ್~ ಚಿತ್ರವು ಬರ್ಲಿನ್ ಚಿತ್ರೋತ್ಸವದಲ್ಲಿ ಮಾರ್ಕೆಟಿಂಗ್ಗೆಂದು ಹೋಗಿದ್ದಕ್ಕೆ ರಜನಿ ಶುಭಾಶಯ ಕೋರಿದ ಬಗೆ ಇದು.
ಇಳಯರಾಜ ಸಂಗೀತ ನೀಡಿರುವ `ಪ್ರಸಾದ್~ ಸಾಮಾಜಿಕ ಸಮಸ್ಯೆಯೊಂದರ ವಸ್ತುವನ್ನು ಇಟ್ಟುಕೊಂಡ ಚಿತ್ರವಾಗಿದ್ದು, ಮನೋಜ್ ಸಾಥಿ ನಿರ್ದೇಶಿಸಿದ್ದಾರೆ. ಅರ್ಜುನ್ ಸರ್ಜಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.