ಹುಬ್ಬಳ್ಳಿ : ವೃತ್ತಿ ರಂಗಭೂಮಿ ಹಾಗೂ ಚಲನಚಿತ್ರ ನಟ, ಗುಡಗೇರಿಯ ಸಂಗಮೇಶ್ವರ ನಾಟ್ಯ ಸಂಘದ ಒಡೆಯರಾದ ಎನ್. ಬಸವರಾಜ ತೀವ್ರ ಅಸ್ವಸ್ಥರಾಗಿ ಬೆಂಗಳೂರಿನ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೀವ್ರ ಸಕ್ಕರೆ ಕಾಯಿಲೆ ಹಾಗೂ ಕ್ಯಾನ್ಸರ್ದಿಂದ ಬಳಲುತ್ತಿರುವ ಅವರು ಐದು ದಿನಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
74 ವಯಸ್ಸಿನ ಅವರು ಎರಡು ತಿಂಗಳ ಹಿಂದಿನವರೆಗೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.