ಬೇಲೂರು: `ವಿಧಾನ ಪರಿಷತ್ತಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ನನ್ನ ಮತ ತಿರಸ್ಕೃತವಾಗಲು ಮಾಜಿ ಶಾಸಕ ಅಂಜನಾಮೂರ್ತಿ ಕಾರಣ~ ಎಂದು ಬೇಲೂರು ಶಾಸಕ ರುದ್ರೇಶಗೌಡ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, `ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಮತ ಚಲಾವಣೆಗೆ ನನಗೆ ಸಹಾಯಕರನ್ನಾಗಿ ಮಾಜಿ ಶಾಸಕ ಅಂಜನಾಮೂರ್ತಿ ಅವರನ್ನು ಕಳುಹಿಸಿದ್ದರು. ನನ್ನ ಪರವಾಗಿ ಅವರೇ ಮತ ಚಲಾವಣೆ ಮಾಡಿದ್ದಾರೆ. ಮತ ತಿರಸ್ಕಾರಗೊಂಡಿರುವುದಕ್ಕೆ ಅವರೇ ಹೊಣೆ~ ಎಂದರು.