ಬೆಂಗಳೂರು: ನಗರದ ಎಚ್ಎಸ್ಆರ್ ಲೇಔಟ್ನ ಸಮರ್ಥನಂ ಟ್ರಸ್ಟ್ನ ತಡೆಗೋಡೆಯ ಬಳಿ ಭಾನುವಾರ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ನವಜಾತ ಹೆಣ್ಣು ಮಗುವನ್ನು ಟ್ರಸ್ಟ್ನ ಸದಸ್ಯರು ರಕ್ಷಿಸಿದ್ದಾರೆ.
`ಬೆಳಗಿನ ಜಾವ 4 ಗಂಟೆ ಸುಮಾರಿಗೆ ತಡೆಗೋಡೆಯ ಹೊರಭಾಗದಲ್ಲಿ ಮಗು ಅಳುವ ಸದ್ದು ಕೇಳಿದ ಕಾವಲುಗಾರರು ಮಗುವನ್ನು ರಕ್ಷಿಸಿದ್ದಾರೆ. ಮಗುವಿಗೆ ಲಕ್ಷ್ಮೀ ಎಂದು ನಾಮಕರಣ ಮಾಡಲಾಗಿದೆ' ಟ್ರಸ್ಟಿ ಎಸ್.ಪಿ.ನಾಗೇಶ್ ತಿಳಿಸಿದರು.