ಅಧ್ಯಕ್ಷತೆ ವಹಿಸಿದ ಕೊಂಕಣ ರೈಲ್ವೆಯ ಹಿರಿಯ ಎಂಜಿನಿಯರ್ ರಘುನಾಥ್ ನಾಯಕ್ ಅವರು ನಮ್ಮಲ್ಲಿ ಮಾನವೀಯತೆ ದೂರವಾಗುತ್ತಿರುವ ಈ ದಿನಗಳಲ್ಲಿ ರಂಗಭೂಮಿ ಅದನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ. ಕುವೆಂಪು ಅವರ ಮಾನವ ಮತ, ವಿಶ್ವಪಥ ಎಲ್ಲರದ್ದಾಗಲಿ ಎಂದು ಹಾರೈಸಿದರು. ಕವಿ, ರಂಗಕರ್ಮಿ ಜಯಪ್ರಕಾಶ ಮಾವಿನಕುಳಿ ಅವರು ಮಾತನಾಡಿ ಇಂದಿನ ಯುವಜನಾಂಗ ಏಕಾಂಗಿಯಾಗಿರಲು ಬಯಸುತ್ತಿದೆ. ಒಂದು ಮೊಬೈಲ್ ಇದ್ದರೆ ಸಾಕಾಗುತ್ತದೆ. ಬದುಕನ್ನು ರೂಪಿಸುವ ಕೆಲಸ ಆಗಬೇಕಾಗಿದೆ. ರಂಗಭೂಮಿ ಒಗ್ಗೂಡಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು. ತೀರ್ಪುಗಾರರಾದ ದಾಕ್ಷಾಯಣಿ ಭಟ್, ಸತೀಶ್ ಕುಲಕರ್ಣಿ, ಸಾಸ್ವಿಹಳ್ಳಿ ಸತೀಶ್ ಉಪಸ್ಥಿತರಿದ್ದರು.ಮೂರು ದಿನಗಳಲ್ಲಿ 10 ನಾಟಕಗಳು ಪ್ರದರ್ಶಗೊಂಡವು.