ಡೆಹ್ರಾಡೂನ್: ಉತ್ತರಾಖಂಡ ಪ್ರವಾಹದಲ್ಲಿ ನಾಪತ್ತೆಯಾದ ಸಾವಿರಾರು ಮಂದಿಯನ್ನು ಅಧಿಕೃತವಾಗಿ ಮೃತಪಟ್ಟಿದ್ದಾರೆಂದು ಘೋಷಿಸಲಾಗುತ್ತದೆ.
ಇದುವರೆಗೆ ಇವರೆಲ್ಲ ಸತ್ತಿದ್ದಾರೆಂದು ಶಂಕಿಸಲಾಗಿತ್ತು. ಆದರೆ ಇವರೆಲ್ಲ ಮೃತಪಟ್ಟಿದ್ದಾಗಿ ಅಧಿಕೃತವಾಗಿ ಘೋಷಿಸಲು ಉತ್ತರಾಖಂಡ ಸರ್ಕಾರ ಸೋಮವಾರ ನಿರ್ಧರಿಸಿದೆ.
ಮೃತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸಿರುವ ಪರಿಹಾರ ಮೊತ್ತ ಇವರಿಗೂ ಸಿಗಲಿದೆ.