ಈ ಮನೆಯಲ್ಲಿ ಪತ್ನಿಯ ಸಹೋದರಿ (ನಾದಿನಿ) ಸವಿತಾ ಮತ್ತು ಅತ್ತೆ ಸರಸ್ವತಿ ಎಂಬವರೊಂದಿಗೆ ವಾಸವಾಗಿದ್ದ. 2010ರ ಜೂನ್ 14ರಂದು ನಾದಿನಿ ಮತ್ತು ಅತ್ತೆಯನ್ನು ಅಲ್ಲಿ ಕೊಲೆ ಮಾಡಿ ನೀರಿನ ಟ್ಯಾಂಕಿಗೆ ಎಸೆದು, ರಮೇಶ್ ನಾಯ್ಕ ಜೂನ್ 16ರಂದು ಮಂಗಳೂರಿಗೆ ಬಂದಿದ್ದ.
ಮಂಗಳೂರಿನ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದುಕೊಂಡು ಮಂಗಳಾದೇವಿ ಬಳಿ ವಾಸ್ತವ್ಯವಿದ್ದ ಪತ್ನಿ ಮನೆಗೆ ಹೋಗಿದ್ದ. ಅಲ್ಲಿದ್ದ ತನ್ನ ಮಕ್ಕಳಾದ ಮೂರೂವರೆ ವರ್ಷದ ಕೃತಿಕಾ ಮತ್ತು ಮೋಹನ್ ರಾಜ್ (10) ಅವರನ್ನು ಬಾಡಿಗೆ ಟ್ಯಾಕ್ಸಿಯೊಂದರಲ್ಲಿ ಪಾಣಾಜೆ ಗ್ರಾಮದ ಅರ್ಧಮೂಲೆ ಎಂಬಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿನ ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಿದ ಆರೋಪವಿತ್ತು. ಮಕ್ಕಳಿಬ್ಬರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.