ಮಾಸ್ಕೊ (ಪಿಟಿಐ): `ಇಂದಿರಾ~ ಸರಣಿಯ ಜಂಟಿ ಸಮರಾಭ್ಯಾಸ ನಡೆಸುತ್ತಿರುವ ಭಾರತ ಮತ್ತು ರಷ್ಯಾ ಸೇನೆಗಳು, ಮಂಗಳವಾರದಿಂದ ಆರಂಭವಾಗುವ (ಆ.7) ಈ ಸರಣಿಯ ನಾಲ್ಕನೇ ಅವತರಣಿಕೆಯಲ್ಲಿ ಇದೇ ಮೊದಲ ಬಾರಿಗೆ ಭಯೋತ್ಪಾದನೆ ನಿಗ್ರಹದ ಗುರಿ ಇರಿಸಿಕೊಂಡು ತಾಲೀಮು ನಡೆಸಲಿವೆ.
ರಷ್ಯಾದ ಆಗ್ನೇಯ ಭಾಗದಲ್ಲಿರುವ ಚೀನಾ ಮತ್ತು ಮಂಗೋಲಿಯಾ ಗಡಿಭಾಗದಲ್ಲಿ ಈ ಜಂಟಿ ಸಮರಾಭ್ಯಾಸ ನಡೆಯಲಿದೆ. ಈ ತಾಲೀಮಿನಲ್ಲಿ ಉಭಯ ದೇಶಗಳ ಸೇನೆಯ ಟ್ಯಾಂಕರ್ಗಳು, ಶಸಸ್ತ್ರ ಯುದ್ಧ ವಾಹನಗಳು, 250ಕ್ಕೂ ಹೆಚ್ಚು ಸೇನಾ ತುಕಡಿಗಳು ಭಾಗವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
`ಇಂದಿರಾ-2012~ ಜಂಟಿ ಸಮರಾಭ್ಯಾಸವನ್ನು ಭಯೋತ್ಪಾದನೆಯನ್ನು ನಿಗ್ರಹಿಸುವ ಗುರಿ ಇಟ್ಟುಕೊಂಡು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಭಾರತ ಸೇನೆಯ ಹೆಚ್ಚುವರಿ ಮಹಾನಿರ್ದೇಶಕ ಮೇಜರ್ ಜನರಲ್ ಆರ್.ಎಸ್. ಚಾಂದ್ ನೇತೃತ್ವದಲ್ಲಿ ಭಾರತದ ಸೇನಾ ತುಕಡಿಗಳು ಈ ಜಂಟಿ ಸಮರಾಭ್ಯಾಸದಲ್ಲಿ ಭಾಗವಹಿಸಲಿದ್ದು, ವಾಯು ಪಡೆಯ ವಿಮಾನಗಳೂ ಭಾಗಿಯಾಗಲಿವೆ. ಈ ತಾಲೀಮು ಆಗಸ್ಟ್ 16ಕ್ಕೆ ಮುಕ್ತಾಯವಾಗಲಿದೆ.