ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜವಾದ ಪ್ರತಿಭೆ ಇರುವವರು ಶ್ರೇಷ್ಠವಾದದ್ದು ಸೃಷ್ಟಿಸಬಲ್ಲರು

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಿಜವಾದ ಪ್ರತಿಭೆ ಇರುವವರು ಶ್ರೇಷ್ಠವಾದದ್ದನ್ನು ಸೃಷ್ಟಿಸಬಲ್ಲರು ಎಂಬುದಕ್ಕೆ ಡುಂಡಿರಾಜ್ ಉತ್ತಮ ಉದಹರಣೆ~ ಎಂದು ಹಿರಿಯ ಸಾಹಿತಿ ಡಾ.ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಕಿತ ಪುಸ್ತಕ ಪ್ರಕಾಶನ ಹೊರತಂದಿರುವ ಎಚ್.ಡುಂಡಿರಾಜ್ ಅವರ `ಹನಿಗಾರಿಕೆ~ ಮತ್ತು `ಬನ್ನಿ ನಮ್ಮ ಹಾಡಿಗೆ~ ಪುಸ್ತಕಗಳನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಡುಂಡಿರಾಜ್ ಕೃಷಿ ವಿಜ್ಞಾನವನ್ನು ಅಭ್ಯಾಸ ಮಾಡಿದ್ದರೂ, ಸಾಹಿತ್ಯದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿದ್ದಾರೆ. ದೇವರಲ್ಲಿ ಮೊದಲಿಗರು ಗಣರಾಜನಾದರೆ, ಹನಿಗವನಗಳನ್ನು ರಚಿಸುವಲ್ಲಿ ಪರಿಣಿತರು ಡುಂಡಿರಾಜರು~ ಎಂದು ಹರ್ಷವ್ಯಕ್ತಪಡಿಸಿದರು.

`ಗಂಭೀರ ವಿಚಾರಗಳನ್ನು ಹಾಸ್ಯ ಮಿಶ್ರಿತ ಪದಗಳ ಮೂಲಕ ಜನರಿಗೆ ಸಂತೋಷವನ್ನು ನೀಡುತ್ತಿರುವ ಇವರ ಹನಿಗವನಗಳ ಬಗ್ಗೆ ವಿಮರ್ಶಾ ವಲಯದಲ್ಲಿ ಹೆಚ್ಚಿನ ಚರ್ಚೆ ನಡೆಯಬೇಕು~ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಬಿ.ಆರ್.ಲಕ್ಷ್ಮಣರಾವ್, ಜರಗನಹಳ್ಳಿ ಶಿವಶಂಕರ್, ಚಿಂತಾಮಣಿ ಕೊಡ್ಲೆಕೆರೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT