ಕೃಷ್ಣಗಿರಿ (ಪಿಟಿಐ): ಇತಿಹಾಸ ಪ್ರಸಿದ್ಧ ಮದುರೆಯ `ಅಧೀನಂ~ ಮಹಾಸಂಸ್ಥಾನ ಪೀಠದ ಉತ್ತರಾಧಿಕಾರಿಯಾಗಿ ಸ್ವಾಮಿ ನಿತ್ಯಾನಂದ ಅವರನ್ನು ನೇಮಕ ಮಾಡಿರುವ ಕ್ರಮದ ವಿರುದ್ಧ ಕಂಚಿಯ ಜಯೇಂದ್ರ ಸರಸ್ವತಿ ಧ್ವನಿ ಎತ್ತಿದ್ದಾರೆ.
ಅಧೀನಂ ಪೀಠಾಧಿಪತಿಗಳು ಕೇಶಮುಂಡನ ಮಾಡಿಸಿಕೊಂಡು ರುದ್ರಾಕ್ಷಿ ಧರಿಸುವುದು ಸಂಪ್ರದಾಯ. ಆದರೆ, ನಿತ್ಯಾನಂದ ಅವರು ಕೇಶಮುಂಡನ ಮಾಡಿಸಿಕೊಂಡಿಲ್ಲ. ಮೇಲಾಗಿ ಅವರ ಮೇಲೆ ಲೈಂಗಿಕ ಹಗರಣದ ಆರೋಪವಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.