‘ಗಣೇಶ ಬಂದ ಕಾಯಿ ಕಡುಬು ತಿಂದ ಚಿಕ್ಕೆರೇಲಿ ಬಿದ್ದ ದೊಡ್ಕೆರೇಲಿ ಎದ್ದ’ ಎಂದು ಮಕ್ಕಳು ಹಾಡುತ್ತಿದ್ದರೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವಿದ್ಯಾರ್ಥಿನಿಯರು ವಿಜಯನಗರದ ಜಿಬಿಬಿ ಸಭಾಂಗಣದಲ್ಲಿ ನಡೆಸಿದ ಕಾರ್ಯಕ್ರಮ ‘ಸಂಕಲ್ಪ’ದಲ್ಲಿ ಸೇಬಿನ ಗಣಪತಿ, ತಂಬಿಟ್ಟು ಗಣಪತಿ, ಪೇಪರ್ ರೋಲ್ ಗಣಪತಿ ತಯಾರಿಸಿದ ಗಮನ ಸೆಳೆದರು.
ಮತ್ತೊಂದೆಡೆ ಮಲ್ಲೇಶ್ವರದ ಎಂ.ಇ.ಎಸ್. ಕಾಲೇಜಿನ ವಿದ್ಯಾರ್ಥಿನಿಯರು ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ತಯಾರಿಸಿ ಸಂಭ್ರಮಿಸಿದರು.