ನವದೆಹಲಿ: ದಿನಸಿ ಸಾಮಾನು, ಹಣ್ಣು ತರಕಾರಿ ಖರೀದಿಸುವ ಗ್ರಾಹಕರು ಇನ್ನು ಮುಂದೆ ಪ್ಲಾಸ್ಟಿಕ್ ಬ್ಯಾಗ್ಗಳಿಗೆ ಹಣ ಪಾವತಿಸುವುದು ಕಡ್ಡಾಯ.
ಪ್ಲಾಸ್ಟಿಕ್ ತ್ಯಾಜ್ಯ (ವ್ಯವಸ್ಥೆ ಮತ್ತು ನಿರ್ವಹಣೆ) ನಿಯಮ 2011ನ್ನು ಕೇಂದ್ರ ಸರ್ಕಾರ ಅಧಿಸೂಚನೆಯ ಮೂಲಕ ಪ್ರಚುರಪಡಿಸಿದ್ದು, ಇನ್ನು ಮುಂದೆ ವ್ಯಾಪಾರಸ್ಥರು ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲಗಳನ್ನು ಉಚಿತವಾಗಿ ನೀಡುವಂತಿಲ್ಲ ಎಂದು ತಿಳಿಸಿದೆ. ಪ್ಲಾಸ್ಟಿಕ್ ಚೀಲಗಳ ಮಾರಾಟದಿಂದ ಬಂದ ಹಣವನ್ನು ಸ್ಥಳಿಯಾಡಳಿತಕ್ಕೆ ನೀಡಲು ಈ ನಿಯಮದಲ್ಲಿ ಅವಕಾಶ ನೀಡಲಾಗಿದೆ.
ಬೇಕಾಬಿಟ್ಟಿ ಪ್ಲಾಸ್ಟಿಕ್ ಬಳಸಿ ಬೀಸಾಡುವುದರಿಂದ ಒಳಚರಂಡಿ ಕಟ್ಟಿಕೊಳ್ಳುವುದರ ಜತೆಗೆ ಪರಿಸರಕ್ಕೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಇಲಾಖೆ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಯಂತ್ರಣಕ್ಕೆ ಹೊಸ ನಿಯಮ ರೂಪಿಸಿದೆ.