ಇದರಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸಂಜೆ ಸಮಯದಲ್ಲಿ ಗೌರಿಬಿದನೂರಿಗೆ 6 ಗಂಟೆಗೆ ಬಸ್ ಇದೆ. ಇದರಿಂದ ಕತ್ತಲಲ್ಲಿ ನಡೆದೇ ಹೋಗಬೇಕಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಈ ಕೂಡಲೇ ಸಾರಿಗೆ ನಿಗಮದ ಜಿಲ್ಲಾ ಅಧಿಕಾರಿಗಳು ಗಮನ ಹರಿಸಿ ಗೌರಿಬಿದನೂರು ಮಾರ್ಗಕ್ಕೆ ಬೆಳಿಗ್ಗೆ-ಸಂಜೆ ನಿಗದಿತ ಸಮಯದಲ್ಲಿ ಬಸ್ಗಳು ಸಂಚರಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಎಸ್ಎಫ್ಐ ತಾಲ್ಲೂಕು ಮುಖಂಡರಾದ ಅಂಬರೀಶ್, ಶ್ರೀನಾಥ್, ಅಜಯ್, ನರಸಿಂಹ, ಕೃಷ್ಣೇಗೌಡ, ಮೂರ್ತಿ, ರಾಘವೇಂದ್ರರೆಡ್ಡಿ, ನಂದೀಶ, ಮಂಜುನಾಥ, ವಿಜಯ್ಕುಮಾರ್ರೆಡ್ಡಿ, ಕಾರ್ತಿಕ್, ಹರೀಶ್, ನಂದಿನಿ, ಪಲ್ಲವಿ, ಸೌಭಾಗ್ಯಲಕ್ಷ್ಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.