ಮುಂಬೈ (ಪಿಟಿಐ): ಆದರ್ಶ ಗೃಹ ನಿರ್ಮಾಣ ಸಂಘದ ಹಗರಣಕ್ಕೆ ಸಂಬಂಧಿಸಿದಂತೆ 14 ಕೋಟಿ ಲಂಚ ನೀಡಲು ಬಂದಿದ್ದರು ಎಂದು ಸೇನಾ ಮುಖ್ಯಸ್ಥ ವಿ. ಕೆ. ಸಿಂಗ್ ಮಾಡಿರುವ ಆಪಾದನೆಗೆ ಸಂಬಂಧಿಸಿದಂತೆ ಸಿಬಿಐ ನಿವೃತ್ತ ಲೆ. ಜ. ತೇಜಿಂದರ್ ಸಿಂಗ್ ಅವರನ್ನು ಪ್ರಶ್ನಿಸಿದೆ.
ವಿವಾದಾತ್ಮಕ ಆದರ್ಶ ಗ್ರಹ ನಿರ್ಮಾಣ ಸಂಘದಲ್ಲಿ ಫ್ಲಾಟ್ ಹೇಗೆ ಮಂಜೂರಾಯಿತು, ಹಣ ಎಲ್ಲಿಂದ ಬಂತು ಮತ್ತು ಇತರ ವಿಚಾರಗಳ ಬಗ್ಗೆ ಪ್ರಶ್ನಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.