ಆಸಕ್ತಿ ಜೊತೆಗೆ ಕಲಿಯುವ ಹುಮ್ಮಸಿದ್ದರೆ ಸಾಧನೆಗೆ ಯಾವುದೇ ತೊಂದರೆ ಇಲ್ಲ ಎಂಬ ಮಾತು ಟಿ.ಜಿ. ನಿವೇದಿತಾ ಪಾಲಿಗೆ ಸತ್ಯವಾಗಿದೆ. ಹುಟ್ಟುತ್ತಲೇ ಶಸ್ತ್ರಚಿಕಿತ್ಸೆಗೆ ಗುರಿಯಾಗಿ ಮಾನಸಿಕ ಹಾಗೂ ದೈಹಿಕವಾಗಿ ಅಸ್ವಸ್ಥಗೊಂಡಿದ್ದಳು. ಈಕೆಗೆ ಮಾತು ಬಾರದು, ಕಿವಿ ಕೇಳಿಸದು, ಇಷ್ಟೆಲ್ಲಾ ವೈಕಲ್ಯದ ನಡುವೆ ಬುದ್ಧಿ ಮಾಂದ್ಯತೆ ಸಹ ಸೇರಿದೆ. ಆದರೆ ಇವರ ಹಠಕ್ಕೆ ನಟರಾಜ ಸೋತಿದ್ದಾನೆ.