ಸಾಗರ : ಹೆಗ್ಗೋಡಿನ ‘ನೀನಾಸಂ ರಂಗಶಿಕ್ಷಣ ಕೇಂದ್ರ’ ಮೇ ತಿಂಗಳಲ್ಲಿ ನಡೆಸುವ ಮೂರು ವಾರಗಳ ರಂಗತರಬೇತಿ ಶಿಬಿರಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.
18ರಿಂದ 35 ವರ್ಷದೊಳಗಿನ, ಎಸ್ಎಸ್ಎಲ್ಸಿವರೆಗೆ ಓದಿದ ಅಭ್ಯರ್ಥಿಗಳಿಗೆ ಅವಕಾಶವಿದೆ. ಶಿಬಿರದಲ್ಲಿ ರಂಗಮಾಧ್ಯಮದ ಬಗ್ಗೆ ಮಾಹಿತಿಯ ಜೊತೆಗೆ, ಶಿಬಿರಾರ್ಥಿಗಳಿಗೆ ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನೂ ಮಾಡಿಸಲಾಗುತ್ತದೆ. ಅರ್ಜಿ ಕಳುಹಿಸಲು ಏಪ್ರಿಲ್ 20 ಕೊನೆಯದಿನ.
ವಿಳಾಸ: ಸಂಚಾಲಕರು, ನೀನಾಸಂ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು-577 417, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ಫೋನ್: 08183-265646.