ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ಕ್ಷೇತ್ರದ ಪುಟ್ಟೇನಹಳ್ಳಿ ವಾರ್ಡ್ನ ದೊರೆಸಾನಿಪಾಳ್ಯದಲ್ಲಿ ₨30 ಲಕ್ಷ ವೆಚ್ಚದಲ್ಲಿ ಕಾವೇರಿ ನೀರು ಸರಬರಾಜು 4ನೇ ಹಂತದ ಯೋಜನೆ ಹಾಗೂ ಒಳಚರಂಡಿ ಕಾಮಗಾರಿಗೆ ಶಾಸಕ ಎಂ.ಸತೀಶ್ ರೆಡ್ಡಿ ಬುಧವಾರ ಗುದ್ದಲಿಪೂಜೆ ನೆರವೇರಿಸಿದರು.
‘ಈ ಯೋಜನೆಯಡಿ 27 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಾಗುವುದು’ ಎಂದು ಅವರು ತಿಳಿಸಿದರು.
ಬಿಬಿಎಂಪಿ ಸದಸ್ಯ ಎಲ್.ರಮೇಶ್, ಬೊಮ್ಮನಹಳ್ಳಿ ಬ್ಲಾಕ್ ಬಿಜೆಪಿ ಅಧ್ಯಕ್ಷ ಮೋಹನ್ರಾಜ್, ಜಲಮಂಡಳಿಯ ಅಧಿಕಾರಿಗಳಾದ ಮೂರ್ತಿ, ಪವನ್ ಇದ್ದರು.