ನವನಗರದಲ್ಲಿರುವ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಡಿಸಿಪಿ (ಅಪರಾಧ ಮತ್ತು ಸಂಚಾರ) ಶ್ರೀನಾಥ ಜೋಶಿ ಅವರು ರಮೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಹಿಂದೆ ಡಿಸಿಪಿ ಆಗಿದ್ದ ಎಸ್.ಎಂ.ಪ್ರತಾಪನ್ ಅವರು ಮಾರ್ಚ್ 31ರಂದು ನಿವೃತ್ತಿಯಾಗಿದ್ದು, ತೆರವು ಆದ ಸ್ಥಾನಕ್ಕೆ ರಮೇಶ್ ನಿಯುಕ್ತಿಗೊಂಡಿದ್ದಾರೆ. 2009ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿರುವ ರಮೇಶ್, ಈ ಮೊದಲು ಚಿಂತಾಮಣಿಯಲ್ಲಿ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.