ಕಠ್ಮಂಡು (ಪಿಟಿಐ): ನೇಪಾಳಕ್ಕೆ ಸೇನಾ ನೆರವು ಪುನರ್ ಆರಂಭಿಸುವ ವಿಷಯ ಪ್ರಗತಿಯಲ್ಲಿದೆ ಎಂದು ಭಾರತ ಬುಧವಾರ ಹೇಳಿದೆ. ದೊರೆ ಜ್ಞಾನೇಂದ್ರ ಅಧಿಕಾರವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರಿಂದ 2005ರಲ್ಲಿ ಭಾರತ ಆ ರಾಷ್ಟ್ರಕ್ಕೆ ಸೇನಾ ನೆರವು ನೀಡುವುದನ್ನು ಸ್ಥಗಿತಗೊಳಿಸಿತ್ತು.
`ನೇಪಾಳಕ್ಕೆ ಸೇನಾ ನೆರವು ಪುನರ್ ಆರಂಭಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಉತ್ಸುಕವಾಗಿವೆ. ಈ ಪ್ರಕ್ರಿಯೆ ಪ್ರಗತಿಯಲ್ಲೂ ಇದೆ~ ಎಂದು ಇಲ್ಲಿಗೆ ಐದು ದಿನಗಳ ಭೇಟಿಗಾಗಿ ಆಗಮಿಸಿರುವ ಭಾರತದ ಭೂಸೇನಾ ಮುಖ್ಯಸ್ಥ ಜನರಲ್ ವಿಕ್ರಂ ಸಿಂಗ್ ತಿಳಿಸಿದರು.ನೇಪಾಳ ಪ್ರಧಾನಿ ಕರೆಯ ಮೇರೆಗೆ ಇಲ್ಲಿಗೆ ಭೇಟಿ ನೀಡಿರುವ ಸಿಂಗ್,ಅಲ್ಲಿನ ಅಧ್ಯಕ್ಷರನ್ನೂ ಭೇಟಿ ಮಾಡಲಿದ್ದಾರೆ.