ಈಸ್ಟ್ ಇಂಡಿಯಾ ಕಂಪೆನಿ ಭರತ ಖಂಡಕ್ಕೆ ಕಾಲಿರಿಸುವುದಕ್ಕಿಂತ ಮೊದಲು ಭಾರತ ಹಲವು ಸ್ವತಂತ್ರ ಪ್ರಾಂತ್ಯ, ರಾಜ್ಯ ಹಾಗೂ ಸಾಮ್ರೋಜ್ಯಗಳನ್ನು ಒಳಗೊಂಡಿತ್ತು. ಭಾರತದಲ್ಲಿದ್ದ ಅಪಾರ ಸಂಪತ್ತು ಕಂಡು ಆಕರ್ಷಿತರಾದ ಹಲವು ದಾಳಿಕೋರರು ಮತ್ತು ಆಕ್ರಮಣಕಾರರು ನಮ್ಮ ದೇಶದತ್ತ ಆಸೆಗಣ್ಣಿನಿಂದ ನೋಡಿದರು. ಇನ್ನು ಕೆಲವರು ಇಲ್ಲಿಯೇ ನೆಲೆ ಕಂಡುಕೊಂಡು ಭಾರತೀಯ ಸಮಾಜದಲ್ಲಿ ಬೆರೆತುಹೋದರು. ಇವರಲ್ಲಿ ಕೆಲವರು ಅದ್ಭುತವಾದ ಸ್ಮಾರಕಗಳನ್ನು ನಿರ್ಮಿಸಿದರು, ಸಮಾಜದಲ್ಲಿ ಕ್ಷಿಪ್ರ ರೀತಿಯ ಬದಲಾವಣೆ ತಂದರು. ಜತೆಗೆ, ಸಾಂಸ್ಕೃತಿಕ ಚಳವಳಿಗಳನ್ನು ಹುಟ್ಟುಹಾಕಿದರು.