ಬೆಂಗಳೂರು: ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಕ್ಷೀಣಿಸಿದೆ. ಕರಾವಳಿಯ ಹಲವು ಪ್ರದೇಶಗಳು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.
ಕೊಲ್ಲೂರಿನಲ್ಲಿ 7 ಸೆಂ.ಮೀ. ಮಳೆಯಾಗಿದೆ. ಕದ್ರಾ 5, ಅಂಕೋಲಾ, ಆಗುಂಬೆ, ಕೊಟ್ಟಿಗೆಹಾರ 4, ಮೂಡುಬಿದರೆ, ಧರ್ಮಸ್ಥಳ, ಉಡುಪಿ, ಗೋಕರ್ಣ, ಶಿರಸಿ 3, ಬೆಳ್ತಂಗಡಿ, ಪುತ್ತೂರು, ಕಾರ್ಕಳ, ಸಿದ್ದಾಪುರ, ಕಾರವಾರ, ಶಿರಾಲಿ, ಗೇರುಸೊಪ್ಪ, ಕುಮಟಾ, ಭಾಗಮಂಡಲ, ಮೂರ್ನಾಡು, ಲಿಂಗನಮಕ್ಕಿ, ತಾಳ ಗುಪ್ಪ, ತೀರ್ಥಹಳ್ಳಿ, ಶೃಂಗೇರಿ, ಮೂಡಿಗೆರೆ, ಕಮ್ಮರಡಿ 2, ಮಂಗಳೂರು, ಉಪ್ಪಿನಂಗಡಿ, ಪಣಂಬೂರು, ಕೋಟ, ಬನವಾಸಿ, ಮಡಿಕೇರಿ, ನಾಪೋಕ್ಲು, ಸೋಮವಾರಪೇಟೆ, ಸಾಗರ, ಕಳಸ, ಸಕಲೇಶಪುರ, ತಿ.ನರಸೀಪುರದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಜಿಲ್ಲೆಗಳು, ದಕ್ಷಿಣ ಒಳನಾಡಿನ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.