ಅಸ್ದುಲ್ಲಾಪುರ್, ಯೂಸೂಫ್ಪುರ್ ಚಕ್ ಶಬೇರಿ ಮತ್ತು ದೆವ್ಲಾ ಗ್ರಾಮಗಳ ರೈತರ ಅರ್ಜಿಗಳನ್ನು ಅಂಗೀಕರಿಸಿದ ಕೋರ್ಟ್ ಈ ಗ್ರಾಮಗಳಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿರುವ ಪ್ರಕಟಣೆಗಳನ್ನು ರದ್ದುಗೊಳಿಸಲಾಗಿದೆ. ಅರ್ಜಿದಾರರು ತಮ್ಮ ಭೂಮಿಯನ್ನು ಪುನರ್ ವಶಕ್ಕೆ ಪಡೆಯಬಹುದು. ಇದಕ್ಕೆ ಮೊದಲು ಒಪ್ಪಂದದಂತೆ ತಾವು ಪಡೆದ ಭೂ ಪರಿಹಾರದ ಹಣವನ್ನು ಜಿಲ್ಲಾಧಿಕಾರಿ ಅವರಿಗೆ ಹಿಂತಿರುಗಿಸಬೇಕು ಎಂದು ಹೇಳಿದೆ.