ಅಮರನಾಥ ಪಾಟೀಲ ಬಂಧನಕ್ಕೆ ಗುಲ್ಬರ್ಗ (ಬಿ) ವಿಭಾಗದ ಡಿಎಸ್ಪಿ ಸಿ.ಕೆ.ಬಾಬಾ ನೇತೃತ್ವದಲ್ಲಿ ಪೊಲೀಸರ ತಂಡ ರಚಿಸಲಾಗಿದ್ದು, ಈಗಾಗಲೇ ಹುಮನಾಬಾದ್, ಮಹಾಗಾಂವ ಮತ್ತಿತರ ಕಡೆ ಶೋಧ ನಡೆಸಿದೆ. ಆದರೆ ಯಾವುದೇ ಬೆಳವಣಿಗೆಗಳು ಕಂಡುಬಂದಿಲ್ಲ. ಹೀಗಾಗಿ ವಿಶೇಷ ತಂಡ ರಚಿಸಿಕೊಂಡು ಹೊರ ಜಿಲ್ಲೆಗಳಲ್ಲಿ ಅವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.