ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಹೊಸದಾಗಿ ನೇಮಕಾತಿ ಹೊಂದಿದ ಲಿಪಿಕ ನೌಕರರಿಗೆ ಏರ್ಪಡಿಸಲಾಗಿದ್ದ ಒಂದೂವರೆ ತಿಂಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ, ಮತ ಭಾಷಾಭಿಮಾನದ ಆಧಾರದಲ್ಲಿ ತಾರತಮ್ಯ ಮಾಡ ಬಾರದು ಎಂಬ ಮೂಲ ಉದ್ದೇಶದಿಂದ ಅಂಬೇಡ್ಕರ್ ಅವರು ಕಾನೂನನ್ನು ರೂಪಿಸಿದರು ಎಂದರು.
ಮಹಿಳಾ ಕಾರ್ಮಿಕರಿಗೆ ಕೂಲಿ ಕೊಡುವ ವಿಷಯದಲ್ಲಿ ತಾರತಮ್ಯ ಮಾಡಬಾರದು. ಕಡಿಮೆ ಕೂಲಿ ಕೊಟ್ಟು, ಪುರುಷರಿಗೆ ಹೆಚ್ಚಿನ ಕೂಲಿ ಕೊಟ್ಟರೆ ಮಹಿಳೆಯು ತನ್ನನ್ನು ಎರಡನೇ ದರ್ಜೆ ಪ್ರಜೆಯೆಂದು ನೋಡುತ್ತಿದ್ದಾರೆ ಎಂಬ ಭಾವನೆ ಅವಳಲ್ಲಿ ಮೂಡುತ್ತದೆ ಎಂದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಸಿದ್ದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ತರಬೇತಿ ಸಂಸ್ಥೆಯ ನಿವೃತ್ತ ಜಂಟಿ ನಿರ್ದೇಶಕ ಬಿ.ಕೆ.ವಾಸು ಹಾಗೂ ಉಪ ಪ್ರಾಚಾರ್ಯ ಕೆ.ಸೌಮ್ಯ ಉಪಸ್ಥಿತರಿದ್ದರು.