ರೋಣ: ಪಟ್ಟಣದ ಕ್ರಮ ಸಂಖ್ಯೆ 79 ನ್ಯಾಯಬೆಲೆ ಅಂಗಡಿಯ ಮಾಲೀಕರು ಅಹಿಂದ ವರ್ಗದವರಿಗೆ ಆಹಾರ ಧಾನ್ಯ ಗಳನ್ನು ವಿತರಿಸದೆ ಆ ಸಮುದಾ ಯಗಳಿಗೆ ಅನ್ಯಾಯ ಮಾಡುತ್ತಿದ್ದು ಈ ಕೂಡಲೇ ನ್ಯಾಯಬೆಲೆ ಅಂಗಡಿಯ ಪರವಾನಿಗೆಯನ್ನು ರದ್ದುಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ತಾಪಂ ಸಭಾಭವನ ದಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.
ಅನ್ನಭಾಗ್ಯ ಯೋಜನೆ ಜಾರಿಯಾ ದಾಗಿನಿಂದ ಇಲ್ಲಿಯವರಗೆ ಅಹಿಂದ ಫಲಾನುಭವಿಗಳಿಗೆ ಸಂಭಂಧಪಟ್ಟ ನ್ಯಾಯಬೆಲೆ ಅಂಗಡಿ ಮಾಲೀಕರು ಯಾವುದೇ ರೀತಿಯ ಆಹಾರ ಧಾನ್ಯ ವಿತರಿಸದೆ ಫಲಾನುಭವಿಗಳಿಗೆ ಅನ್ಯಾಯ ಎಸಗಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕುರಹಟ್ಟಿ ಗ್ರಾಪಂ ನಲ್ಲಿ 2009 ರಿಂದ 2012 ರ ತನಕ ಭಾರಿ ಅವ್ಯವಹಾರವಾಗಿದ್ದು, ಈ ಕುರಿತು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೂ ತಿಳಿಸಿ ದರೂ, ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಗ್ರಾಮ ಪಂಚಾಯ್ತಿ ಕಚೇರಿಗೆ ಭೇಟಿ ಪರಿಶೀಲನೆ ನಡೆಸಿ ಸಂಬಂಧ ಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮಜೂರಪ್ಪ ಶಾಂತಗೇರಿ ಲೋಕಾಯುಕ್ತರಿಗೆ ದೂರು ನಿಡಿದರು.
ಇದೇ ವೇಳೆ, ಶಿಕ್ಷಕ ಎಂ.ಹಿ.ದಿವಾಣದ ಅವರು, ಶಿಕ್ಷಕರ ಸಂಘದ ಬ್ಯಾಂಕ್ನಿಂದ ನನಗೆ ಅನ್ಯಾಯವಾಗಿದ್ದು ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ದೂರು ಸಲ್ಲಿಸಿದರು.
ಲೋಕಾಯುಕ್ತ ಸಿಪಿಐ ಸಂಗನ ಗೌಡ, ನಾರಾಯಣ ಚೂರಿ, ನಾರಾ ಯಣ ತಾಯಣ್ಣವರ ಉಪಸ್ಥಿತರಿದ್ದರು.