ಅಪರೂಪಕ್ಕೆ ಯಾರಾದರೂ ಇವರ ಜಾತೀಯತೆಯ ಈ ಕೆಟ್ಟ ಪದ್ಧತಿಯ ಬಗ್ಗೆ ಗಟ್ಟಿಯಾಗಿ ಕೇಳಿದರೆ, ಒಂದು ಸಿದ್ಧ ಉತ್ತರ ಕಾದಿರುತ್ತದೆ. `ವಿಶೇಷ ಪೂಜೆ ಮಾಡಿಸಿದವರು ಅಥವಾ ಹರಕೆ ಹೊತ್ತವರು ತಮ್ಮ ಹಣದಿಂದ ಸಮಾರಾಧನೆ ಮಾಡಿಸುತ್ತಾರೆ. ಅಪರಿಚಿತರು (ಬ್ರಾಹ್ಮಣೇತರರು) ಊಟಕ್ಕೆ ಕೂತರೆ ಎಬ್ಬಿಸಬೇಕಾಗುತ್ತದೆ~ಎಂಬ ಸಮಜಾಯಿಷಿ ನೀಡುತ್ತಾರೆ. ಹಾಗಾದರೆ ಹರಕೆ ಹೊತ್ತವರು ಬ್ರಾಹ್ಮಣರೇ ಆಗಿರುತ್ತಾರೆಯೆ? ಹಾಗೊಂದು ವೇಳೆ ಹರಕೆ ಹೊತ್ತವರು ತಮ್ಮ ಹಣದಿಂದಲೇ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಮಾಡಿದರೂ, ಊಟಕ್ಕೆ ಕೂತ ಬ್ರಾಹ್ಮಣೇತರರನ್ನು ಅರ್ಚಕರೇ ನಿರ್ದಾಕ್ಷಿಣ್ಯವಾಗಿ ಎಬ್ಬಿಸುವ ಪದ್ಧತಿಯನ್ನು ಏಕೆ ಪೋಷಿಸಬೇಕು.