ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಕ್ತಿ ಭೇದ ವಿರುದ್ಧ ಕ್ರಮ ಅವಶ್ಯ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪಾಜಕದ ಕುಂಜಾರು ಗಿರಿಯಲ್ಲಿ ಜಾತಿ ಕೇಳಿ ಊಟದಿಂದ ಹೊರಕಳುಹಿಸಿದ ಘಟನೆ ಅಮಾನವೀಯವಾದುದು. ಪಶ್ಚಿಮ ಕರಾವಳಿ ಸಾಲಿನ ದೇವಸ್ಥಾನಗಳಲ್ಲಿ ಈಗಲೂ ಈ ಅನಿಷ್ಟ ಪದ್ಧತಿ, ಬ್ರಾಹ್ಮಣರು- ಬ್ರಾಹ್ಮಣೇತರ ಪಂಕ್ತಿಭೇದ ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ. ಇಂಥದೇ ಅನುಭವ, ಕೆಲವು ದೇವಾಲಯಗಳಲ್ಲಿ ನನಗೂ ಆಗಿದೆ.

ಅಪರೂಪಕ್ಕೆ ಯಾರಾದರೂ ಇವರ ಜಾತೀಯತೆಯ ಈ ಕೆಟ್ಟ ಪದ್ಧತಿಯ ಬಗ್ಗೆ ಗಟ್ಟಿಯಾಗಿ ಕೇಳಿದರೆ, ಒಂದು ಸಿದ್ಧ ಉತ್ತರ ಕಾದಿರುತ್ತದೆ. `ವಿಶೇಷ ಪೂಜೆ ಮಾಡಿಸಿದವರು ಅಥವಾ ಹರಕೆ ಹೊತ್ತವರು ತಮ್ಮ ಹಣದಿಂದ ಸಮಾರಾಧನೆ ಮಾಡಿಸುತ್ತಾರೆ. ಅಪರಿಚಿತರು (ಬ್ರಾಹ್ಮಣೇತರರು) ಊಟಕ್ಕೆ ಕೂತರೆ ಎಬ್ಬಿಸಬೇಕಾಗುತ್ತದೆ~ಎಂಬ ಸಮಜಾಯಿಷಿ ನೀಡುತ್ತಾರೆ. ಹಾಗಾದರೆ ಹರಕೆ ಹೊತ್ತವರು ಬ್ರಾಹ್ಮಣರೇ ಆಗಿರುತ್ತಾರೆಯೆ? ಹಾಗೊಂದು ವೇಳೆ ಹರಕೆ ಹೊತ್ತವರು ತಮ್ಮ ಹಣದಿಂದಲೇ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಮಾಡಿದರೂ, ಊಟಕ್ಕೆ ಕೂತ ಬ್ರಾಹ್ಮಣೇತರರನ್ನು ಅರ್ಚಕರೇ ನಿರ್ದಾಕ್ಷಿಣ್ಯವಾಗಿ ಎಬ್ಬಿಸುವ ಪದ್ಧತಿಯನ್ನು ಏಕೆ ಪೋಷಿಸಬೇಕು.

ವಾಸ್ತವವಾಗಿ ಅವರು ಹೇಳುವ ಸಹಭೋಜನವೆಂದರೆ, ಬ್ರಾಹ್ಮಣೇತರರಿಗಾಗಿ ಮಾಡಿದ ವ್ಯವಸ್ಥೆ, ಹರಕೆ ಊಟವೆಂದರೆ ದೇವಸ್ಥಾನದವರೇ ದೇವಸ್ಥಾನದ ಹಣದಿಂದ ಬ್ರಾಹ್ಮಣರಿಗೆ ಮಾತ್ರ ಮಾಡಿದ ವ್ಯವಸ್ಥೆ. ಜಾತಿಭೇದವನ್ನು ಆಚರಿಸಲು ಇತ್ತೀಚೆಗೆ ಈ ಅರ್ಚಕರು ಕಂಡುಕೊಂಡ ಉಪಾಯವೇ ಈ ಹರಕೆ ಅಥವಾ ವಿಶೇಷ ಪೂಜೆ ಊಟ. ಮುಜರಾಯಿ ಇಲಾಖೆ ಇಂಥ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT