ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಆಹಾರ ಧಾನ್ಯಗಳ ವಿತರಣೆ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಮನಗರ : ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲು ಪಡಿತರ ಆಹಾರಧಾನ್ಯ, ಸಕ್ಕರೆ ಮತ್ತು ಸೀಮೆಎಣ್ಣೆಯನ್ನು ನ್ಯಾಯಬೆಲೆ ಅಂಗಡಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ ತಿಳಿಸಿದ್ದಾರೆ.

ಅಂತ್ಯೋದಯ ಪಡಿತರ ಚೀಟಿಗೆ 29 ಕೆಜಿ ಅಕ್ಕಿ, 6 ಕೆ.ಜಿ ಗೋಧಿ , 1.5 ಕೆ.ಜಿ ಸಕ್ಕರೆ. ಬಿ.ಪಿ.ಎಲ್ ಪಡಿತರ ಚೀಟಿಗಳಿಗೆ ಪ್ರತಿ ಯೂನಿಟ್‌ಗೆ 4 ಕೆ.ಜಿ ಗರಿಷ್ಠ 20 ಕೆಜಿ ಅಕ್ಕಿ, ಪ್ರತಿ 1 ಅಥವಾ 2 ಯೂನಿಟ್ ಇದ್ದಲ್ಲಿ 1 ಕೆಜಿ, 3 ಯೂನಿಟ್ ಇದ್ದಲ್ಲಿ 2 ಕೆ.ಜಿ, 4 ಅಥವಾ 5 ಯೂನಿಟ್ ಇದ್ದಲ್ಲಿ 3 ಕೆ.ಜಿ ರಾಗಿ, 1.5 ಕೆ.ಜಿ ಸಕ್ಕರೆ. ಎಪಿಎಲ್ ಪಡಿತರ ಚೀಟಿಗಳಿಗೆ 14 ಕೆ.ಜಿ ಅಕ್ಕಿ, 1 ಕೆ.ಜಿ ಗೋಧಿಯನ್ನು ವಿತರಿಸಲಾಗುವುದು ಎಂದು ಪ್ರಕಟಣೆ ಹೇಳಿದ್ದಾರೆ.

ಚನ್ನಪಟ್ಟಣ ಪಟ್ಟಣಕ್ಕೆ 06ಲೀ, ಗ್ರಾಮಾಂತರಕ್ಕೆ 3ಲೀ, ಮಾಗಡಿ, ಕನಕಪುರ ಪಟ್ಟಣಕ್ಕೆ 5 ಲೀ, ಗ್ರಾಮಾಂತರಕ್ಕೆ 03ಲೀ, ರಾಮನಗರ ಪಟ್ಟಣಕ್ಕೆ 06ಲೀ, ಗ್ರಾಮಾಂತರಕ್ಕೆ 3ಲೀ, ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT