ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ವಿತರಣೆಯಲ್ಲಿ ವಂಚನೆ: ಆರೋಪ

Last Updated 13 ಡಿಸೆಂಬರ್ 2013, 8:32 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕಿನ ಹುಳದೇನ­ಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿ-­ಯಲ್ಲಿ ಸಮರ್ಪಕವಾಗಿ ಪಡಿತರ­ವನ್ನು ಗ್ರಾಮಸ್ಥರಿಗೆ ವಿತರಿಸದೇ ವಂಚಿಸ­ಲಾಗು­ತ್ತಿದೆ ಎಂದು ಆರೋಪಿಸಿ ತಿಮ್ಮನಾಯ­ಕನ­ಹಳ್ಳಿ ಗ್ರಾಮಸ್ಥರು  ಗುರುವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೆದಾರ್ ರಾಮಚಂದ್ರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಗ್ರಾಮದ ಮುಖಂಡ ಮುನಿರಾಜು ಮಾತನಾಡಿ ಹುಳದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನಾಲ್ಕು ಗ್ರಾಮಗಳಾದ ಜಿನಗ ತಿಮ್ಮನಹಳ್ಳಿ, ದೊಡ್ಡಮಲ್ಲೆ, ಚಿಕ್ಕಮಲ್ಲೆ, ಕೂರ್ನ­ಹೊಸ­-ಹಳ್ಳಿ ಕೋಟೆ ತಿಮ್ಮನಾಯಕನ­ಹಳ್ಳಿ ಗ್ರಾಮಸ್ಥರಿಗೆ ಪಡಿತರ ವಿತರಣೆ ಸರಿಯಾಗಿ ನಡೆದಿಲ್ಲ.  ಅನ್ನಭಾಗ್ಯ ಯೋಜನೆಯಡಿ  ಅಕ್ಕಿ ವಿತರಿಸದೆ  ಕಾಳ­ಸಂತೆ­ಯಲ್ಲಿ ಅಕ್ಕಿ ಮಾರಾಟ ಮಾಡ­ಲಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿ ಕುಟುಂಬಕ್ಕೆ 5 ಲೀಟರ್‌ ಸೀಮೆ ಎಣ್ಣೆ ಬದಲು ಕೇವಲ 2ರಿಂದ 3 ಲೀಟರ್‌ ಸೀಮೆಎಣ್ಣೆಯನ್ನು ವಿತರಿಸ­ಲಾಗು­ತ್ತಿದೆ ಎಂದು ಆಕ್ರೋಶಭರಿತರಾಗಿ ಹೇಳಿದರು.

ಗ್ರಾಮೀಣ ಭಾಗದ ಜನರಿಗೆ ಪಡಿತರ ವಿತರಣೆಗೆ  ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು  ಅನುಕೂಲ ಕಲ್ಪಿಸುವಂತೆ ಶಿರಸ್ತೆದಾರ್ ರಾಮಚಂದ್ರಪ್ಪ ಅವರಿಗೆ ಮನವಿ ಪತ್ರ ನೀಡಿದರು.  ಗ್ರಾಮದ ಮುಖಂಡರಾದ ಮುನಿಸ್ವಾಮಿ, ಆಂಜಿನಪ್ಪ, ಗೋಪಾ­ಲಪ್ಪ, ವೆಂಕಟೇಶ್, ವಿಶ್ವನಾಥ, ಗಿರಿ­ಯಪ್ಪ, ಶಿವಣ್ಣ, ಕುಮಾರ್,      ಮುನಿ­ರಾಜು ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT