ಶಿವಮೊಗ್ಗ: ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ತರಗತಿಗಳ ಪ್ರವೇಶವನ್ನು 15 ದಿನ ಮುಂದೂಡಬೇಕು ಹಾಗೂ ಬಿಕಾಂ ಮತ್ತು ಬಿಬಿಎಂ ಪ್ರವೇಶಕ್ಕೆ ಹೆಚ್ಚುವರಿ ಶುಲ್ಕ ವಸೂಲಿ ಕೈಬಿಡಬೇಕೆಂದು ಆಗ್ರಹಿಸಿ ಎನ್ಎಸ್ಯುಐ ಕಾರ್ಯಕರ್ತರು ನಗರದ ಆಚಾರ್ಯ ತುಳಸಿ ನ್ಯಾಷನಲ್ ಕಾಮರ್ಸ್ (ಎಟಿಎನ್ಸಿ) ಕಾಲೇಜಿನ ಪ್ರಾಂಶುಪಾಲರ ಕೊಠಡಿಗೆ ಬೀಗ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.
ಏಕರೂಪ ಶಿಕ್ಷಣ ನೀತಿಯಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಪರೀಕ್ಷೆ ಮುಗಿಸುವ ಮುನ್ನವೇ ಮುಂದಿನ ತರಗತಿಗೆ ಪ್ರವೇಶ ಆರಂಭಿಸುವುದನ್ನು ನಿಲ್ಲಿಸಬೇಕು. ಅದರಲ್ಲೂ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಗಳು ಈಗತಾನೇ ಪ್ರಾರಂಭವಾಗಿವೆ.
ಅಷ್ಟರ ಒಳಗೆ ದ್ವಿತೀಯ ಮತ್ತು ತೃತೀಯ ವರ್ಷದ ಪದವಿಗೆ ಪ್ರವೇಶ ಆರಂಭಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಎನ್ಎಸ್ಯುಐ ಅಧ್ಯಕ್ಷ ಸಿ.ಜಿ. ಮಧುಸೂದನ್, ಕೆ. ದೇವೇಂದ್ರಪ್ಪ, ಶ್ರೀಜಿತ್, ಚೇತನ್, ಅಜೇಯ ಪಾಲ್ಗೊಂಡಿದ್ದರು.