‘ದೇವಮಾನವನಿಗೆ ಸೊಳ್ಳೆಗಳ ಕಾಟ’ (ಪ್ರ.ವಾ. ಸೆ. 5) ಒಳ್ಳೆಯ ಸುದ್ದಿಯೇ ಸರಿ. ದೇವತಾ ವಿಗ್ರಹದ ಮೇಲೆ ಇಲಿಗಳು ಓಡಾ ಡುವುದನ್ನು ಕಂಡು, ಮಹರ್ಷಿ ದಯಾನಂದ ಸರಸ್ವತಿ, ದೇವರಲ್ಲಿ ನಂಬಿಕೆ ಕಳೆದುಕೊಂಡ ರಂತೆ!
ಅದೇನೇ ಇರಲಿ, ‘ದೇವ ಮಾನವ’ರು ಒಬ್ಬೊಬ್ಬರಾಗಿ ‘ದೆವ್ವ ಮಾನವ’ರಾಗುತ್ತಿರುವುದು ಈಗ ಭಾರತದ ‘ದೈತ್ಯ’ ವಿದ್ಯಮಾನ! ದೇವ, ದೈವ, ದೆವ್ವ – ಎಲ್ಲ ಒಂದೇ ಮೂಲದ ಶಬ್ದಗಳು. (ನದೀ ಮೂಲ, ಋಷಿ ಮೂಲ ಗಳನ್ನು ಹೇಗೊ ಹಾಗೆ ‘ದೇವಮಾನವ’ ಮೂಲವನ್ನೂ ನೋಡಬಾರದು) ಅಂದ ಹಾಗೆ, ಸೊಳ್ಳೆಪರದೆಗೆ ಕಾರಾಗೃಹದಲ್ಲಿ ಬರವೆ? ಪರಮಾತ್ಮನಿಗೆ ‘ಪರ’ದೆಯ ಕೊರತೆಯೇಕೆ? ಛೆ!