ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಭಾಷಿಕರಿಗೆ ಮಣೆ ಬೇಡ

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೆಲವೇ ದಿನಗಳಲ್ಲಿ ಮೈಸೂರು ದಸರಾ ಉತ್ಸವಕ್ಕೆ ಚಾಲನೆ ಸಿಗಲಿದೆ. ರಾಜ್ಯದ ಸಂಸ್ಕೃತಿ, ಪರಂಪರೆ ಈ ಉತ್ಸವದಲ್ಲಿ ಅಡಕವಾಗಿರು ವುದರಿಂದಲೇ ಅದನ್ನು ನಾಡಹಬ್ಬವೆಂದು ಕರೆಯಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುವ ಕೆಲವು ಕಾರ್ಯಕ್ರಮಗಳು ವಿಡಂಬನೆ ಯಂತಾಗಿವೆ.

ಯುವ ದಸರಾ ಹೆಸರಿನಲ್ಲಿ ಹಿಂದಿ ಪ್ರದೇಶದ ಕಲಾವಿದರನ್ನು ಕೇಳಿದಷ್ಟು ಸಂಭಾವನೆ ಕೊಟ್ಟು ಕರೆತರುತ್ತಾರೆ.   ದೂರದ ಊರಿನಿಂದ ಬರುವ ದೇಸಿ ಕಲಾವಿದರು, ನೃತ್ಯ ತಂಡದವರಿಗೆ ಸರಿಯಾಗಿ ವ್ಯವಸ್ಥೆ ಕಲ್ಪಿಸದೇ ಅವರನ್ನು ಅವಮಾನಿಸುವುದು– ಇವೆಲ್ಲ ಈಗೀಗ ಸಾಮಾನ್ಯವಾಗಿಬಿಟ್ಟಿದೆ.

ಕನ್ನಡಿಗರ ತೆರಿಗೆ ಹಣದಿಂದ ಸರ್ಕಾರದ ಮೂಲಕ ಆಚರಿಸುವ ದಸರಾ ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು, ಕನ್ನಡಿಗರ ಪ್ರತಿಭೆಯನ್ನು ಹೊರಜಗತ್ತಿಗೆ ಪ್ರದ ರ್ಶಿಸುವ ವೇದಿಕೆ ಆಗಬೇಕೇ ಹೊರತು ಪರಭಾಷೆ ಯವರ ಮನರಂಜನೆಗೆ ನೆಲೆ ದೊರಕಿಸಿಕೊಡುವ ವೇದಿಕೆ ಆಗಬಾರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT