ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಸಭಾನಾಯಕ: ಸಿಎಂ ತಿಳಿಸಿಲ್ಲ- ಸಭಾಪತಿ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ವಿಜಾಪುರ: `ವಿಧಾನ ಪರಿಷತ್ ಸಭಾನಾಯಕರಾಗಿ ತಮ್ಮನ್ನು ಪರಿಗಣಿಸಬೇಕೆ ಅಥವಾ ಈಗಿನ ಸಭಾ ನಾಯಕ ಡಾ.ವಿ.ಎಸ್. ಆಚಾರ್ಯ ಅವರನ್ನೇ ಮುಂದುವರೆಸಬೇಕೇ ಎಂಬ ಬಗ್ಗೆ ಮುಖ್ಯಮಂತ್ರಿ ಡಿ.ವಿ. ಸದಾನಂಗೌಡ ಇನ್ನೂ ನನಗೆ ಲಿಖಿತವಾಗಿ ಏನನ್ನೂ ತಿಳಿಸಿಲ್ಲ~ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕಮೂರ್ತಿ ಹೇಳಿದರು.

`ಮುಖ್ಯಮಂತ್ರಿ ಸದಾನಂದಗೌಡರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ ಈ ಪ್ರಶ್ನೆ ಉದ್ಭವಿಸಿದೆ~ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

 `ರಾಜ್ಯಸಭೆ ಸದಸ್ಯರಾಗಿರುವ ಪ್ರಧಾನಿ ಡಾ.ಮನಮೋಹನ ಸಿಂಗ್ ರಾಜ್ಯಸಭೆ ಸಭಾನಾಯಕರೂ ಆಗಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ವಿಧಾನ ಪರಿಷತ್ ಸದಸ್ಯರಾಗಿದ್ದು, ಅವರೂ ಅಲ್ಲಿಯ ವಿಧಾನ ಪರಿಷತ್ ಸಭಾನಾಯಕರಾಗಿದ್ದಾರೆ~ ಎಂದರು.

`ವಿಧಾನಪರಿಷತ್ ಸದಸ್ಯರಾದವರು ಮುಖ್ಯಮಂತ್ರಿಯಾದರೆ ಅವರೇ ಸಭಾನಾಯಕರು ಆಗಬೇಕೆ ಎಂಬ ನಿಯಮವೇನಿಲ್ಲ. ಅವರೇ ಸಭಾ ನಾಯಕರು ಆಗಬಹುದು ಇಲ್ಲವೆ ವಿಧಾನ ಪರಿಷತ್‌ನ ತಮ್ಮ ಪಕ್ಷದ ಸದಸ್ಯರೊಬ್ಬರನ್ನು ಸಭಾ ನಾಯಕ ಎಂದು ಸೂಚಿಸಲು ಅವಕಾಶವಿದೆ~ ಎಂದು ವಿವರಿಸಿದರು.

`ಮುಖ್ಯಮಂತಿಯವರು ಈ ಕುರಿತು ನಮಗೆ ಲಿಖಿತ ತಿಳಿಸಬೇಕು. ವಿಧಾನ ಮಂಡಳ ಅಧಿವೇಶನ ಆರಂಭವಾಗುವುದಕ್ಕಿಂತ ಒಂದು ದಿನ ಮುಂಚಿತವಾಗಿ ತಿಳಿಸಿದರೂ ಸಾಕು~. ತಾವು ಸಭಾಪತಿ ಆಗಿರುವುದರಿಂದ ಬಿಜೆಪಿಯಲ್ಲಿನ ಬಿಕ್ಕಟ್ಟಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT