ನವದೆಹಲಿ: ಮನುಷ್ಯ ಮತ್ತು ವನ್ಯಜೀವಿ ನಡುವಿನ ಸಂಘರ್ಷ ನಿವಾರಣೆಗೆ ಪರಿಸರ ಕೇಂದ್ರಿತ ನಿಯಮಗಳನ್ನು ಅಳವಡಿಸಿಕೊಳ್ಳಲು ಸುಪ್ರೀಂಕೋರ್ಟ್ ಕರೆ ನೀಡಿದೆ.
ವಿಶ್ವದಲ್ಲಿ ಮಾನವನೇ ಶ್ರೇಷ್ಠ ಎನ್ನುವುದರ ಬದಲು ಪರಿಸರ ಕೇಂದ್ರಿತ ಭಾವನೆ ಬೆಳೆಸಿಕೊಂಡರೆ ಪರಿಸರ ನ್ಯಾಯವನ್ನು ಸಾಧಿಸಬಹುದು ಎಂದು ನ್ಯಾಯಮೂರ್ತಿಗಳಾದ ಕೆ.ಎಸ್.ರಾಧಾಕೃಷ್ಣನ್ ಹಾಗೂ ಸಿ.ಕೆ.ಪ್ರಸಾದ್ ಅವರನ್ನು ಒಳಗೊಂಡ ಪೀಠ ಹೇಳಿದೆ.
ಉದಂತಿ ವನ್ಯಧಾಮದಲ್ಲಿ ಏಷ್ಯಾ ಕಾಡುಕೋಣಗಳನ್ನು ಸಂರಕ್ಷಿಸಲು ಕ್ರಮ ತೆಗೆದುಕೊಳ್ಳುವಂತೆ ಛತ್ತೀಸ್ಗಡ ರಾಜ್ಯಕ್ಕೆ ನಿರ್ದೇಶನ ನೀಡುವಾಗ ಹೈಕೋರ್ಟ್ ಈ ರೀತಿ ಹೇಳಿತು.