ಕೋಲ್ಕತ್ತ (ಪಿಟಿಐ): ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿನಿಯರ ಗುಂಪೊಂದು ಫಲಿತಾಂಶದ ಪುನರ್ಪರಿಶೀಲನೆಗೆ ಒತ್ತಾಯಿಸಿ ಪ್ರಾಂಶುಪಾಲ ಮತ್ತು ಶಿಕ್ಷಕರನ್ನು ಒಂದು ದಿನ ಒತ್ತೆಯಾಗಿಟ್ಟುಕೊಂಡು, ಆನಂತರ ಬಿಡುಗಡೆಗೊಳಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪರೀಕ್ಷಾ ಫಲಿತಾಂಶ ಕುರಿತು ತೀವ್ರ ಅಸಮಾಧಾನ ಹೊಂದಿದ್ದ `ರಿಶಿ ಅರಬಿಂದೊ ಬಾಲಿಕಾ ವಿದ್ಯಾಲಯ'ದ ಸುಮಾರು 29 ವಿದ್ಯಾರ್ಥಿನಿಯರು, ಸೋಮವಾರ ಮಧ್ಯಾಹ್ನದಿಂದ ಪ್ರಾಂಶುಪಾಲ ಮತ್ತು ಶಿಕ್ಷಕರನ್ನು ಒತ್ತೆ ಇಟ್ಟುಕೊಂಡಿದ್ದರು.