ಬೆಂಗಳೂರು: ಕರ್ನಾಟಕ ಸಾಹಿತ್ಯ ಪರಿಷತ್ತು `ಪ್ರಚಲಿತ ವಿದ್ಯಮಾನಗಳ ಮಂಥನ~ ದ ಮುಖ್ಯ ಆಶಯದೊಂದಿಗೆ ಯುವಜನರಿಗಾಗಿ `ಪರ್ಯಾಯ ಸಂಸ್ಕೃತಿ ಶಿಬಿರ~ ವನ್ನು ಏರ್ಪಡಿಸಿದೆ. ಅ. 26, 27 ಮತ್ತು 28 ರಂದು ಮೂರು ದಿನಗಳ ನಡೆಯಲಿರುವ ಈ ಶಿಬಿರದಲ್ಲಿ ನಾಡಿನ ಖ್ಯಾತ ಲೇಖಕರು ಮತ್ತು ಚಿಂತಕರು ಉಪನ್ಯಾಸ ನೀಡಿ, ಸಂವಾದ ನಡೆಸಲಿದ್ದಾರೆ. ಪರಿಷತ್ತು ನಡೆಸುವ ಈ ಮೂರನೇ ಶಿಬಿರ ಬೆಂಗಳೂರಿನ ಸಮೀಪದ ನೆಲಮಂಗಲ ಹೆದ್ದಾರಿಯಲ್ಲಿರುವ ಶ್ರೀ ಬಸವಣ್ಣದೇವರ ಮಠದಲ್ಲಿ ನಡೆಯಲಿದ್ದು, ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಕರ್ಯ ಇರುತ್ತದೆ.
ಆಸಕ್ತ ಯುವಜನರು ಸಂಪರ್ಕಿಸಿ: 94481 19060 ಮತ್ತು 98451 48247.